ಮಾಜಿ ಪ್ರಧಾನಮಂತ್ರಿ ಮನಮೋಹನ್ ಸಿಂಗ್‌ ಅವರ ಶ್ರದ್ಧಾಂಜಲಿ ಕಾರ್ಯಕ್ರಮ

- Advertisement -
- Advertisement -

ಚಿಕ್ಕಬಳ್ಳಾಪುರ: ಜಿಲ್ಲಾ ಮತ್ತು ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಆಶ್ರಯದಲ್ಲಿ ಶ್ರದ್ಧಾಂಜಲಿ ಕಾರ್ಯಕ್ರಮ ಶುಕ್ರವಾರ ನಡೆದಿದ್ದು, ಮಾಜಿ ಪ್ರಧಾನಮಂತ್ರಿ ಮತ್ತು ಶ್ರೇಷ್ಠ ಅರ್ಥಶಾಸ್ತ್ರಜ್ಞ ಡಾ. ಮನಮೋಹನ್ ಸಿಂಗ್‌ ಅವರ ಮಹತ್ವದ ಕೊಡುಗೆಗಳನ್ನು ಸ್ಮರಿಸಲಾಯಿತು.

ಜಿಲ್ಲಾ ಕಸಾಪ ಅಧ್ಯಕ್ಷ ಪ್ರೊ. ಕೋಡಿ ರಂಗಪ್ಪ ಮಾತನಾಡಿ, “ಮನಮೋಹನ್ ಸಿಂಗ್‌ ಅವರು ಬಡವರ ಪ್ರಗತಿ ಮತ್ತು ಆರ್ಥಿಕ ಸಮತೋಲನಕ್ಕಾಗಿ ಉದಾರೀಕರಣ ನೀತಿಗಳನ್ನು ಜಾರಿಗೆ ತಂದರು. 90ರ ದಶಕದಲ್ಲಿ ದೇಶದ ಬಡತನ ನಿವಾರಣೆಗಾಗಿ ಅವರು ಜಾರಿಗೆ ತಂದ ಆರ್ಥಿಕ ವ್ಯವಸ್ಥೆ ಬಡವರಿಗೆ ಸ್ವಾವಲಂಬನೆ ಮತ್ತು ಜೀವನೋಪಾಯಕ್ಕಾಗಿ ಅನೇಕ ಅವಕಾಶಗಳನ್ನು ಸೃಷ್ಟಿಸಿತು,” ಎಂದು ಹೈಲೈಟ್ ಮಾಡಿದರು.

ಅವರ ಪ್ರಗತಿಶೀಲ ನೀತಿಗಳು ಜಾಗತೀಕರಣದ ಸಂದರ್ಭದಲ್ಲೂ ದುಡಿಮೆಗಳನ್ನು ಪ್ರೋತ್ಸಾಹಿಸಿ, ಅತ್ಯುತ್ತಮ ಗುಣಮಟ್ಟದ ಶಿಕ್ಷಣವನ್ನು ಎಲ್ಲ ವರ್ಗಗಳ ಮಕ್ಕಳಿಗೆ ತಾರತಮ್ಯವಿಲ್ಲದೆ ಒದಗಿಸಲು ಶಿಕ್ಷಣ ಹಕ್ಕು ಕಾಯ್ದೆಯನ್ನು ಜಾರಿಗೊಳಿಸಿದರು ಎಂದು ಅವರು ಶ್ಲಾಘಿಸಿದರು.

ಆರ್ಥಿಕ ತಜ್ಞ, ವೈಜ್ಞಾನಿಕ ಚಿಂತಕ, ಮತ್ತು ಜನಪರ ಕಾಳಜಿಯ ರಾಜಕೀಯ ನಾಯಕರಾಗಿ ದೇಶದ ಅಭಿವೃದ್ಧಿಗೆ ಅನೇಕ ರೀತಿಯಲ್ಲಿ ದಾರಿದೀಪವಾದ ಸಿಂಗ್‌ ಅವರ ಚಿಂತನೆಗಳನ್ನು ಅನುಸರಿಸುವ ಮೂಲಕ ಭಾರತ ಸ್ವಾವಲಂಬನೆಗೆ ಮುನ್ನಡೆಯಬೇಕಿದೆ ಎಂದು ಅವರು ಸಲಹೆ ನೀಡಿದರು.

ಈ ಸಂದರ್ಭದಲ್ಲಿ ಎಂ. ಶಂಕರ್, ಸರ್ದಾರ್ ಚಾಂದ್ ಪಾಷಾ, ಅಣ್ಣಮ್ಮ, ಸತೀಶ್ ಸೇರಿದಂತೆ ಹಲವರು ಮಾತನಾಡಿ, ಸಿಂಗ್‌ ಅವರ ಸಾಧನೆಗಳನ್ನು ಸ್ಮರಿಸಿದರು.

ತಾಲ್ಲೂಕು ಕಸಾಪ ಅಧ್ಯಕ್ಷ ಯಲವಹಳ್ಳಿ ಸೊಣ್ಣೇಗೌಡ, ಹಾಗೂ ವಿವಿಧ ಘಟಕದ ಸದಸ್ಯರಾದ ಎಸ್.ಎನ್. ಅಮೃತ್ ಕುಮಾರ್, ಟಿ.ವಿ. ಚಂದ್ರಶೇಖರ್, ಪಟೇಲ್ ನಾರಾಯಣಸ್ವಾಮಿ, ಮಂಚನಬಲೆ ಶ್ರೀನಿವಾಸ್, ಶಶಿಕಲಾ, ಸುಜಾತ, ಮಹಮ್ಮದ್ ಬಿಲಾಲ್ ಮತ್ತಿತರರು ಕಾರ್ಯಕ್ರಮದಲ್ಲಿ ಭಾಗವಹಿಸಿದರು.

For Daily Updates WhatsApp ‘HI’ to 7406303366

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!