25.3 C
Bengaluru
Friday, October 18, 2024

ದ್ವಿಚಕ್ರವಾಹನ ಕಾರು ಡಿಕ್ಕಿ: ಮಗು ಸೇರಿ ನಾಲ್ಕು ಮಂದಿಗೆ ಗಾಯ

- Advertisement -
- Advertisement -

Chintamani: ಚಿಂತಾಮಣಿ ತಾಲೂಕ್ಕಿನ ಮದನಪಲ್ಲಿ (Madanapalli) ರಸ್ತೆಯ ಐಮರೆಡ್ಡಿಹಳ್ಳಿ (Aimareddihally) ಗೇಟ್ ಬಳಿ ಭಾನುವಾರ ದ್ವಿಚಕ್ರವಾಹನ ಮತ್ತು ಕಾರು ಡಿಕ್ಕಿ (Bike Car Accident) ಹೊಡೆದ್ದು ಮಗು ಸೇರಿ ನಾಲ್ಕು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.

ಗಾಯಾಳುಗಳನ್ನು ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲ್ಲೂಕಿನ ತಾಡಿಗೋಳ್ ಸಮೀಪದ ಆನಂದ ಆಶ್ರಮದ ನಂದೀಶ್, ತಾಡಿಗೋಳ್ ಗ್ರಾಮದ ಆರತಿ ಮತ್ತು ಅವರ 2 ವರ್ಷದ ಮಗು, ತಾಲ್ಲೂಕಿನ ಕರಿಯಪ್ಪಲ್ಲಿ ಗ್ರಾಮದ ನಾಗವೇಣಿ ಎಂದು ಗುರುತಿಸಲಾಗಿದೆ. ಬೈಕ್‌ ಐಮರೆಡ್ಡಿಹಳ್ಳಿ ಗೇಟ್ ಸಮೀಪ ಬರುತ್ತಿದ್ದಾಗ ಮದನಪಲ್ಲಿ ಕಡೆಯಿಂದ ಬಂದ ಆಂಧ್ರಪ್ರದೇಶ ಮೂಲದ ಕಾರು ಹಿಂದಿನಿಂದ ಡಿಕ್ಕಿ ಹೊಡೆದಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಸ್ಥಳೀಯರು ಕೂಡಲೇ ಪೊಲೀಸರ ಹೈವೇ ಪೆಟ್ರೋಲ್ ವಾಹನಕ್ಕೆ ಸುದ್ದಿ ಮುಟ್ಟಿಸಿದ್ದಾಗ ಪೊಲೀಸರು ಸ್ಥಳಕ್ಕೆ ಧಾವಿಸಿದ್ದಾರೆ. ಗಾಯಾಳುಗಳನ್ನು ಪೊಲೀಸ್ ವಾಹನದಲ್ಲೆ ನಗರದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಯಿತು. ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆ ಪ್ರಕರಣ ದಾಖಲಾಗಿದೆ.

For Daily Updates WhatsApp ‘HI’ to 7406303366

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.
Captcha verification failed!
CAPTCHA user score failed. Please contact us!
error: Content is protected !!