Chikkaballapur : ಚಿಕ್ಕಬಳ್ಳಾಪುರ ನಗರದ ಜಿಲ್ಲಾ ನ್ಯಾಯಾಲಯದಲ್ಲಿರುವ (Court) ವಕೀಲರ ಸಂಘಕ್ಕೆ (Advocates’ Association) ಬುಧವಾರ ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ (District Commissioner P N Ravindra) ಭೇಟಿ (Visit) ನೀಡಿ ಪರಿಶೀಲನೆ ನಡೆಸಿದರು. ಭೇಟಿ ವೇಳೆ ಕಂದಾಯ ನ್ಯಾಯಾಲಯಗಳ ಕುರಿತು ವಕೀಲರೊಂದಿಗೆ ಸಂವಾದ ನಡೆಸಿದರು.
ಜಿಲ್ಲಾ ವಕೀಲರ ಸಂಘದಲ್ಲಿ 500ಕ್ಕೂ ಹೆಚ್ಚು ವಕೀಲರು ಕೆಲಸ ನಿರ್ವಹಿಸುತ್ತಿದ್ದಾರೆ. ವೃತ್ತಿ ಸಮಯದಲ್ಲಿ ಹಲವು ಸಮಸ್ಯೆಗಳನ್ನು ಸಹ ಎದುರಿಸುತ್ತಿದ್ದಾರೆ. ವಕೀಲರಿಗೆ ಶೀಘ್ರವೇ ದೃಢೀಕೃತ ಪ್ರತಿಗಳನ್ನು ಒದಗಿಸಬೇಕು. ನಕಲು ಪ್ರತಿಗಳನ್ನು ಕಕ್ಷಿದಾರರು ಮತ್ತು ವಕೀಲರಿಗೆ ಬೇಗ ನೀಡಬೇಕು. ಕಂದಾಯ ಅದಾಲತ್ ನಡೆಸಬೇಕು. ಚೆಕ್ಲಿಸ್ಟ್ ಮಾಡಿದ ತಕ್ಷಣ ಆ ಪ್ರಕರಣಕ್ಕೆ ಸಂಖ್ಯೆಯನ್ನು ನಮೂದಿಸಿ ನೋಂದಾಯಿಸಿಕೊಳ್ಳಬೇಕು. ಹೀಗೆ ಹಲವು ಸಮಸ್ಯೆಗಳ ಪರಿಹಾರಕ್ಕೆ ಸಂವಾದದಲ್ಲಿ ಮನವಿ ಮಾಡಿದರು.
ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿಗಳು ವಕೀಲರ ಮನವಿಗಳನ್ನು ಕೂಲಂಕುಷವಾಗಿ ಪರಿಶೀಲಿಸಲಾಗುವುದು ಎಂದು ಭರವಸೆ ನೀಡಿದರು.
ಸಭೆಯಲ್ಲಿ ನ್ಯಾಯಮೂರ್ತಿ ಅರುಣಕುಮಾರಿ, ವಕೀಲರ ಸಂಘದ ಜಿಲ್ಲಾಧ್ಯಕ್ಷ ಆರ್.ಶ್ರೀನಿವಾಸ್, ಮುರಳಿಮೋಹನ್, ಪ್ರಕಾಶ್, ಬಾಲಕೃಷ್ಣರಾಜು, ಸುಬ್ರಮಣಿ, ಕೆ.ಎಂ.ಗೋವಿಂದರೆಡ್ಡಿ, ಮುನಿರಾಜು, ನವೀನ್ ಕುಮಾರ್, ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.