26.6 C
Bengaluru
Wednesday, October 23, 2024

eOffice ತಂತ್ರಾಂಶಕ್ಕೆ ಚಾಲನೆ

- Advertisement -
- Advertisement -

Sidlaghatta : ಆಡಳಿತದಲ್ಲಿ ಪಾರದರ್ಶಕತೆ ಹೆಚ್ಚಿಸುವುದು ಸೇರಿದಂತೆ ಕಡಿಮೆ ಕಾಗದ ಬಳಕೆ ಹಾಗು ಕಡತಗಳ ತ್ವರಿತ ವಿಲೇವಾರಿ ಮಾಡುವ ಸಲುವಾಗಿ ಸರ್ಕಾರ ಇ ಆಪೀಸ್ ತಂತ್ರಾಂಶ ಜಾರಿಗೆ ತಂದಿದೆ ಎಂದು ಶಾಸಕ ಬಿ.ಎನ್.ರವಿಕುಮಾರ್ ಹೇಳಿದರು.

ನಗರದ ತಾಲ್ಲೂಕು ಕಚೇರಿಯಲ್ಲಿ ಶುಕ್ರವಾರ ಇ ಆಫೀಸ್ ತಂತ್ರಾಂಶಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಇ ಆಪೀಸ್ ತಂತ್ರಾಂಶದಿಂದ ಎಲ್ಲಾ ಕೆಲಸಗಳು ಸುಲಭವಾಗಿ ನಡೆಯಲಿದ್ದು ಕಡತಗಳ ಮೇಲೆ ದಿನಾಂಕ ಮತ್ತು ಸಮಯ ನಮೂದಾಗುತ್ತದೆ. ಯಾರ ಫೈಲ್ ಯಾರ ಬಳಿ ಇದೆ, ಕಡತದ ಸ್ಥಿತಿಗತಿಗಳು ನೋಡಲು ಸಹಾಯವಾಗುತ್ತದೆ. ಇಲ್ಲಿ ವಿಳಂಬಕ್ಕೆ ಅವಕಾಶವೇ ಇರುವುದಿಲ್ಲ. ಇ ಆಪೀಸ್‌ನಲ್ಲಿ ನೋಟ್ ಸೀಟ್, ಕಡತಗಳು ಯಾವ ಹಂತದಲ್ಲಿವೆ ಎನ್ನುವುದನ್ನು ಮೇಲಾಧಿಕಾರಿಗಳು ಗಮನಿಸುವ ವ್ಯವಸ್ಥೆಯಿರುವುದರಿಂದ ವಿನಾಕಾರಣ ವಿಳಂಬಕ್ಕೆ ಸಾಧ್ಯವಿರುವುದಿಲ್ಲ ಎಂದರು.

ಬೇರೆ ಬೇರೆ ಕಚೇರಿಯಿಂದ ಬರುವ ಪ್ರಮುಖ ಪತ್ರಗಳು ಯಾರದೋ ಬಳಿ ಉಳಿದು ಸಂಬಂಧಪಟ್ಟ ಅಧಿಕಾರಿಗೆ ಸಿಗುವುದು ಈ ಹಿಂದೆ ತಡವಾಗುತ್ತಿತ್ತು. ಈ ಎಲ್ಲಾ ತೊಂದರೆ ತಪ್ಪಿಸಲು ಇ ಆಫೀಸ್ ತಂತ್ರಾಂಶ ಸರ್ಕಾರ ಜಾರಿಗೆ ತಂದಿದ್ದು ಸಿಬ್ಬಂದಿ ಜಾಗೃತರಾಗಿ ಕೆಲಸ ನಿರ್ವಹಿಸಬೇಕು ಎಂದರು.

ತಹಶೀಲ್ದಾರ್ ಬಿ.ಎನ್.ಸ್ವಾಮಿ, ತಾ.ಪಂ ಇಓ ಜಿ.ಮುನಿರಾಜ, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ವೆಂಕಟೇಶಮೂರ್ತಿ, ಗ್ರೇಡ್ 2 ತಹಶೀಲ್ದಾರ್ ಶ್ರೀನಿವಾಸಲು ನಾಯ್ಡು, ಜೆಡಿಎಸ್ ಮುಖಂಡ ತಾದೂರು ರಘು, ಕಂದಾಯ ಇಲಾಖೆಯ ಸಿಬ್ಬಂದಿ ಹಾಜರಿದ್ದರು.

For Daily Updates WhatsApp ‘HI’ to 7406303366

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.
Captcha verification failed!
CAPTCHA user score failed. Please contact us!
error: Content is protected !!