29.8 C
Bengaluru
Wednesday, February 25, 2026

BJP ಮತ್ತು JDS ಮೈತ್ರಿಯ ಶಕ್ತಿ ಏನೆಂಬುದು ಜನ ತೋರಿಸಿಕೊಟ್ಟಿದ್ದಾರೆ : ಕೆ.ಸುಧಾಕರ್

- Advertisement -
- Advertisement -

Gauribidanur : ಗೌರಿಬಿದನೂರು ನಗರದಲ್ಲಿ ಭಾನುವಾರ ಸಂಸದ ಕೆ.ಸುಧಾಕರ್ (Sudhakar K) ನೇತೃತ್ವದಲ್ಲಿ BJP JDS ಮೈತ್ರಿ ಕಾರ್ಯಕರ್ತರಿಗೆ ಅಭಿನಂದನಾ ಕಾರ್ಯಕ್ರಮ (Karyakartha Meeting) ನಡೆಸಲಾಯಿತು.

ಕಾರ್ಯಕ್ರಮದಲ್ಲಿ ಮಾತನಾಡಿದ ಸಂಸದ ಕೆ.ಸುಧಾಕರ್ ” ಶಾಶ್ವತ ನೀರಾವರಿ ಯೋಜನೆ ತಂದು ಕೆರೆ ತುಂಬಿಸಿದಾಗ ಮಾತ್ರ ಈ ಭಾಗದ ಜನರ ಋಣ ತೀರಿಸುವಂತಾಗುತ್ತದೆ. ಕೇಂದ್ರ ಸರ್ಕಾರದಿಂದ ಹೊಸ ರೈಲ್ವೆ ಯೋಜನೆ, ರಾಷ್ಟ್ರೀಯ ಹೆದ್ದಾರಿ ಮತ್ತು ಹೆಚ್ಚು ಉದ್ಯೋಗಾವಕಾಶ ಸೃಷ್ಟಿಸುವ ಕೈಗಾರಿಕೆಗಳು ಮತ್ತು ಪ್ರಧಾನ ಮಂತ್ರಿ ಅವಾಸ್ ಯೋಜನೆಯಿಂದ ಬಡವರಿಗೆ ಮನೆ ಕಲ್ಪಿಸಲಾಗುವುದು. ಬಿಜೆಪಿ ಮತ್ತು ಜೆಡಿಎಸ್ ಮೈತ್ರಿಯ ಶಕ್ತಿ ಏನೆಂಬುದು ಲೋಕಸಭಾ ಚುನಾವಣೆಯಲ್ಲಿ ಜನ ತೋರಿಸಿಕೊಟ್ಟಿದ್ದಾರೆ” ಎಂದು ತಿಳಿಸಿದರು.

ಬಿಜೆಪಿ ಜಿಲ್ಲಾಧ್ಯಕ್ಷ ರಾಮಲಿಂಗಪ್ಪ, ಡಾ. ಶಶಿಧರ್, ರವಿನಾರಾಯಣ ರೆಡ್ಡಿ, ಜೆಡಿಎಸ್ ಮುಖಂಡ ಸಿ ಆರ್ ನರಸಿಂಹ ಮೂರ್ತಿ,ಬಿ ಜಿ ವೇಣುಗೋಪಾಲ ರೆಡ್ಡಿ, ರಮೇಶ್ ರಾವ್,ನಗರ ಸಭಾ ಸದಸ್ಯ ಮೋಹನ್, ನಾಗ ಭೂಷಣ ರಾವ್, ರಂಗನಾಥ್,ವೇಮ ರೆಡ್ಡಿ, ಚಂದ್ರಮಣಿ, ಸಾವಿತ್ರಮ್ಮ ಉಪಸ್ಥಿತರಿದ್ದರು.

For Daily Updates WhatsApp ‘HI’ to 7406303366

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!
error: Content is protected !!