Home News ಹಿಂದಿ ಶಿಕ್ಷಕರ ಪುನಃಶ್ಚೇತನ ಕಾರ್ಯಾಗಾರ

ಹಿಂದಿ ಶಿಕ್ಷಕರ ಪುನಃಶ್ಚೇತನ ಕಾರ್ಯಾಗಾರ

0
655
Sidlaghatta Covid-19 SSLC Examination

Sidlaghatta : Covid-19 ಹಿನ್ನೆಲೆಯಲ್ಲಿ ಕಳೆದೆರಡು ವರ್ಷಗಳಿಂದ ವಿದ್ಯಾರ್ಥಿಗಳು ಶೈಕ್ಷಣಿಕ ಚಟುವಟಿಕೆಗಳಲ್ಲಿ ಹಿಂದುಳಿದಿದ್ದು ಎಲ್ಲಾ ವಿದ್ಯಾರ್ಥಿಗಳನ್ನು ಸಹ ಪ್ರಾರಂಭಿಕ ಹಂತದಿಂದ ಸಿದ್ಧಗೊಳಿಸಿ ಮುಂಬರುವ ಎಸ್ಸೆಸ್ಸೆಲ್ಸಿ ಪರೀಕ್ಷೆಗೆ (SSLC Exam) ಅಣಿಗೊಳಿಸಬೇಕು ಎಂದು ಪ್ರಭಾರಿ ಕ್ಷೇತ್ರ ಶಿಕ್ಷಣಾಧಿಕಾರಿ (BEO) ಆಂಜನೇಯ ಹೇಳಿದರು.

ಶಿಡ್ಲಘಟ್ಟ ತಾಲ್ಲೂಕಿನ ತುಮ್ಮನಹಳ್ಳಿ ಸರ್ಕಾರಿ ಪ್ರೌಡಶಾಲೆ (Thummanahalli Government School) ಯಲ್ಲಿ ಶುಕ್ರವಾರ SSLC ಪರೀಕ್ಷೆಯ ಹಿನ್ನಲೆಯಲ್ಲಿ ಜಿಲ್ಲಾ ಉಪನಿರ್ದೇಶಕರ ಕಚೇರಿ ಹಾಗು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾಗಿದ್ದ ಸರ್ಕಾರಿ ಅನುದಾನಿತ ಹಾಗು ಅನುದಾನರಹಿತ ಪ್ರೌಡಶಾಲಾ ಹಿಂದಿ ಶಿಕ್ಷಕರ ಪುನಃಶ್ಚೇತನ ಕಾರ್ಯಾಗಾರದಲ್ಲಿ ಭಾಗವಹಿಸಿ ಮಾತನಾಡಿದರು.

SSLC ಪರೀಕ್ಷೆಯಲ್ಲಿ ತಾಲ್ಲೂಕಿನಲ್ಲಿ ಪ್ರತಿ ವರ್ಷವೂ ಹಿಂದಿ ವಿಷಯದಲ್ಲಿ ಅತ್ಯುತ್ತಮ ಫಲಿತಾಂಶ ಬರುತ್ತಿದ್ದು ಈ ಸಾಲಿನಲ್ಲಿಯೂ ಸಹ ನೂರಕ್ಕೆ ನೂರರಷ್ಟು ಫಲಿತಾಂಶ ಬರುವಂತೆ ಶಿಕ್ಷಕರು ಶ್ರಮಿಸಬೇಕು ಎಂದರು.

ಸಂಪನ್ಮೂಲ ಶಿಕ್ಷಕರಾಗಿ ತುಮ್ಮನಹಳ್ಳಿ ಶಾಲೆಯ ಶಿಕ್ಷಕಿಯರಾದ ಹೇಮಾವತಿ ಹಾಗು ಶಿವಲೀಲಾ ಭಾಗವಹಿಸಿ ಹಿಂದಿ ವಿಷಯದ ಬಗ್ಗೆ 8, 9, 10 ನೇ ತರಗತಿಗಳ ಪಠ್ಯ ವಿಷಯಗಳಲ್ಲಿನ ಮೌಲ್ಯಮಾಪನ ವಿಧಾನಗಳು ಹಾಗು ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಈ ಭಾರಿ ಕಡಿತಗೊಂಡಿರುವ ವಿಷಯಗಳು ಹಾಗೂ ಪರೀಕ್ಷೆಗೆ ತಯಾರಿ ಮಾಡಿಕೊಳ್ಳಬೇಕಾದ ವಿಧಾನಗಳನ್ನು ತಿಳಿಸಿದರು.

ಕಾರ್ಯಾಗಾರದಲ್ಲಿ ಮುಖ್ಯ ಶಿಕ್ಷಕ ಮಂಜುನಾಥ್ ಸೇರಿದಂತೆ ತಾಲೂಕಿನ ಎಲ್ಲಾ ಸರ್ಕಾರಿ ಅನುದಾನಿತ ಹಾಗು ಅನುದಾನರಹಿತ ಶಾಲೆಗಳ ಹಿಂದಿ ವಿಷಯದ ಶಿಕ್ಷಕರು ಪಾಲ್ಗೊಂಡಿದ್ದರು.

For Daily Updates WhatsApp ‘HI’ to 7406303366

NO COMMENTS

LEAVE A REPLY

Please enter your comment!
Please enter your name here

error: Content is protected !!