ಕೋದಂಡರಾಮಸ್ವಾಮಿ ದೇವಾಲಯದಲ್ಲಿ ಸೀತಾರಾಮ ಕಲ್ಯಾಣೋತ್ಸವ

- Advertisement -
- Advertisement -

Srinivasapur : ಶ್ರೀನಿವಾಸಪುರ ತಾಲ್ಲೂಕಿನ ರಾಯಲ್ಪಾಡು ಹೋಬಳಿಯ ಚಿರುಕೋರಪಲ್ಲಿಯ ಕೋದಂಡರಾಮಸ್ವಾಮಿ ದೇವಾಲಯದಲ್ಲಿ ಸೀತಾರಾಮ ಕಲ್ಯಾಣೋತ್ಸವ (Sita Rama Kalyanotsava) ನಡೆಸಲಾಯಿತು.

ಗ್ರಾಮದಲ್ಲಿನ ಕಟ್ಟಿಂದ ಗಂಗಮ್ಮ, ಅಂಕಾಲಮ್ಮ, ನಾಗದೇವತೆ, ಶಾಸನ ದೇವತೆಗೆ ವಿಶೇಷ ಪೂಜೆ ನಡೆಸಿ ದೇವಾಲಯದಲ್ಲಿ ಬೆಳಗ್ಗೆ ಅಭಿಷೇಕ, ಅರ್ಚನೆ, ತೀರ್ಥ ಹಾಗೂ ಪಾನಕ ಪಣ್ಯಾರ, ಪ್ರಸಾದ ವಿನಯೋಗ ನಡೆಯಿತು. ಮದ್ಯಾಹ್ನ ಬೂರಗಮಾಕಲಪಲ್ಲಿ ಗಂಗಮ್ಮ ದೇವಿ ಉತ್ಸವ ವಿವಿಧ ಸಾಂಸ್ಕೃತಿಕ ಕಾರ್ಯಗಳು ಜರುಗಿ ರಾತ್ರಿ ಸೀತಾರಾಮ ಕಲ್ಯಾಣೋತ್ಸವ ಹಾಗೂ ಗ್ರಾಮದ ಪ್ರಮುಖ ಬೀದಿಗಳಲ್ಲಿ ಅದ್ದೂರಿಯಾಗಿ ಬೆಳ್ಳಿರಥದಲ್ಲಿ ವಿವಿಧ ಜಾನಪದ ಸಾಂಸ್ಕೃತಿಕ ತಂಡಗಳೊಂದಿಗೆ ಮೆರವಣಿಗೆ ನಡೆಯಿತು.

ಸುಮಂತ್‌ಶಾಸ್ತ್ರಿ, ಸಿ.ಎನ್.ವೆಂಕಟಸ್ವಾಮಿರೆಡ್ಡಿ, ಲಕ್ಷ್ಮಣರೆಡ್ಡಿ, ರಘುನಾಥರೆಡ್ಡಿ, ಬೈರೆಡ್ಡಿ, ಸುಧಾಕರ, ಸುಬ್ಬಿರೆಡ್ಡಿ, ನಾಗರಾಜರೆಡ್ಡಿ, ಕಿಟ್ಟ, ಸಿ.ಎಲ್.ಶ್ರೀನಿವಾಸರೆಡ್ಡಿ ಸುಬ್ಬು, ನರಸಿಂಹಾರೆಡ್ಡಿ, ರೆಡ್ಡೋರಿ ವೆಂಕಟರಮಣಾರೆಡ್ಡಿ, ಶ್ರೀನಿವಾಸರೆಡ್ಡಿ, ಗೋಪಾಲ ರೆಡ್ಡಿ, ವೆಂಕಟಶಿವಾರೆಡ್ಡಿ ವಿ.ನಾಗರಾಜ ರೆಡ್ಡಿ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

For Daily Updates WhatsApp ‘HI’ to 7406303366

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!