Gudibande : ಗುಡಿಬಂಡೆ ತಾಲ್ಲೂಕಿನ ವರ್ಲಕೊಂಡ (Varlakonda) ಸರ್ಕಾರಿ ಪ್ರೌಢಶಾಲೆಯಲ್ಲಿ M. R. ಸ್ವಾಭಿಮಾನಿ ಫೌಂಡೇಷನ್ ಹಾಗೂ ದೇವನಹಳ್ಳಿ ಆಕಾಶ್ ಆಸ್ಪತ್ರೆ (Akash Hospital, Devanahalli) ಸಹಯೋಗದಲ್ಲಿ 550ಕ್ಕೂ ಹೆಚ್ಚು ಜನರಿಗೆ ಉಚಿತ ಆರೋಗ್ಯ ತಪಾಸಣೆ (Free Medical Camp) ನಡೆಸಲಾಯಿತು.
ಆರೋಗ್ಯ ಶಿಬಿರದಲ್ಲಿ ಒಬ್ಬರಿಗೆ ಕ್ಯಾನ್ಸರ್ ಕಾಣಿಸಿಕೊಂಡಿದ್ದು ಅವರಗೆ ಹೆಚ್ಚಿನ ಚಿಕಿತ್ಸೆ ಕೊಡಿಸುವ ಸಲುವಾಗಿ ಆಕಾಶ್ ಆಸ್ಪತ್ರೆಗೆ ದಾಖಲು ಮಾಡಿಸುತ್ತಿದ್ದೇವೆ ಎಂದು ಎಂ.ಆರ್.ಸ್ವಾಭಿಮಾನಿ ಫೌಂಡೇಷನ್ ಸಂಸ್ಥಾಪಕ ಆರ್.ಮಿಥುನ್ ರೆಡ್ಡಿ ತಿಳಿಸಿದರು.
ಪ.ಪಂ.ಮಾಜಿ ಅಧ್ಯಕ್ಷ ಅಪ್ಸರ್ ಪಾಷ, ಮಾಜಿ ಉಪಾಧ್ಯಕ್ಷ ರಾಜಣ್ಣ, ರಾಮಾಂಜಿನಯ್ಯ, ಮಣಿ, ಸಂತೋಷ, ನಾರಾಯಣಸ್ವಾಮಿ, ಮನು, ಪೃಥ್ವಿ ಮತ್ತಿತರರು ಉಪಸ್ಥಿತರಿದ್ದರು.