Home News Chikkaballapur ಅಮೃತ ವಾಟಿಕಗೆ ನಮ್ಮ ಮಣ್ಣು

ಅಮೃತ ವಾಟಿಕಗೆ ನಮ್ಮ ಮಣ್ಣು

0
429
Amrit Vatika Chikkaballapur Soil Collection

Chikkaballapur : ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಭವನದ ಮುಂಭಾಗ ಗುರುವಾರ ಜಿಲ್ಲಾಧಿಕಾರಿ ಪಿ.ಎನ್ ರವೀಂದ್ರ ಹಾಗೂ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಪ್ರಕಾಶ್ ಜಿ.ಟಿ.ನಿಟ್ಟಾಲಿ ನವದೆಹಲಿಯ ರಾಷ್ಟ್ರೀಯ ಯುದ್ದ ಸ್ಮಾರಕದ ಬಳಿ ನಿರ್ಮಾಣವಾಗುತ್ತಿರುವ ‘ಅಮೃತ ವಾಟಿಕ’ (Amrit Vatika) ಹೆಸರಿನ ಉದ್ಯಾನಕ್ಕೆ ಚಿಕ್ಕಬಳ್ಳಾಪುರ ಜಿಲ್ಲೆಯಿಂದ ಮೃತ್ತಿಕೆ (ಮಣ್ಣು) (Soil Collection) ಸಂಗ್ರಹಿಸಿ ಕಳುಹಿಸಿಕೊಡುವ ಅಭಿಯಾನಕ್ಕೆ ಚಾಲನೆ ನೀಡಿದರು.

ನಮ್ಮ ನೆಲ, ನಮ್ಮ ಜಲ ಅಭಿಯಾನದ ಅಂಗವಾಗಿ ದೇಶ ಪ್ರೇಮ ಪ್ರೇರೇಪಿಸುವ ಹಾಗೂ ಭಾರತೀಯ ಸೈನಿಕರ ಗೌರವಾರ್ಥ ನವದೆಹಲಿಯ ಯುದ್ದ ಸ್ಮಾರಕದ ಬಳಿ ಉದ್ಯಾನ ನಿರ್ಮಿಸಲು ಪ್ರಧಾನಿ ಕರೆ ನೀಡಿದ್ದು ಅದರಂತೆ ಚಿಕ್ಕಬಳ್ಳಾಪುರ ಜಿಲ್ಲೆಯ ಎಲ್ಲ ಗ್ರಾಮ ಪಂಚಾಯಿತಿಗಳಿಂದ ಪವಿತ್ರ ಮೃತ್ತಿಕೆಯನ್ನು ಸಂಗ್ರಹಿಸಿ ದೆಹಲಿಗೆ ಕಳುಹಿಸಿಕೊಡಲಾಗುತ್ತಿದೆ ಎಂದರು.

ಕ್ರೀಡಾ ಮತ್ತು ಯುವ ಸಬಲೀಕರಣ ಇಲಾಖೆಯ ರಾಘವೇಂದ್ರ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

For Daily Updates WhatsApp ‘HI’ to 7406303366

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!
error: Content is protected !!