30.1 C
Bengaluru
Monday, May 12, 2025

ತೀಮಾಕಲಪಲ್ಲಿ ಕಳ್ಳತನ: ಆರೋಪಿಗಳ ಬಂಧನ

- Advertisement -
- Advertisement -

Bagepalli : ಬಾಗೇಪಲ್ಲಿ ತಾಲೂಕಿನ ತೀಮಾಕಲಪಲ್ಲಿ (Timakalapalli) ಗ್ರಾಮದ ಬಳಿ ನಡೆದ ಎರಡು ಪ್ರತ್ಯೇಕ ಮನೆ ಕಳ್ಳತನ ಪ್ರಕರಣಗಳಲ್ಲಿ (robbery) ಪೊಲೀಸರು ಕಾರ್ಯಾಚರಣೆ ನಡೆಸಿ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತರಿಂದ ಸುಮಾರು ₹28 ಲಕ್ಷ ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕುಶಾಲ್ ಚೌಕ್ಸಿ ತಿಳಿಸಿದ್ದಾರೆ.

ಕಟ್ಟೆದಾದ ಚಿನ್ನ, ಬೆಳ್ಳಿ, ಕಾರು ವಶ:

2023ರ ಏಪ್ರಿಲ್‌ನಲ್ಲಿ ತೀಮಾಕಲಪಲ್ಲಿ ಗ್ರಾಮದ ನಿವಾಸಿ ನರಸಿಂಹಮೂರ್ತಿ ಮತ್ತು ಸುಧಾಕರ್ ಎಂಬುವವರ ಮನೆಗಳಲ್ಲಿ ನಡೆದ ಕಳ್ಳತನ ಪ್ರಕರಣದಲ್ಲಿ, ಬಾಗೇಪಲ್ಲಿ ಠಾಣಾ ಸರ್ಕಲ್ ಇನ್‌ಸ್ಪೆಕ್ಟರ್ ಪ್ರಶಾಂತ್ ವರ್ಣಿ ಅವರ ನೇತೃತ್ವದಲ್ಲಿ ವಿಶೇಷ ತಂಡ ರಚಿಸಲಾಗಿತ್ತು. ತನಿಖೆ ಮುಂದುವರಿಸಿದ ತಂಡ, ಆರೋಪಿತರಾದ ಉಮಾಶಂಕರ್ ಮತ್ತು ಜಗನ್ನಾಥ್ ಅವರನ್ನು ಬಂಧಿಸಿದೆ. ಅವರಿಂದ 319 ಗ್ರಾಂ ಚಿನ್ನಾಭರಣ, 2 ಕೆ.ಜಿ ಬೆಳ್ಳಿ, ₹3 ಲಕ್ಷ ಮೌಲ್ಯದ ಕಾರು, ಹಾಗೂ ₹28,07,200 ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಲಾರಿ ಕಳ್ಳತನ ಪ್ರಕರಣ – ಬೆಂಗಳೂರು ಮೂಲದ ಇಬ್ಬರು ಬಂಧನ:

2025ರ ಮಾರ್ಚ್‌ನಲ್ಲಿ ಬಾಗೇಪಲ್ಲಿ ಪಟ್ಟಣದ 21ನೇ ವಾರ್ಡ್‌ನ ನಾರಾಯಣಸ್ವಾಮಿ ಎಂಬುವವರು ನೀಡಿದ ದೂರುದಂತೆ, ಲಾರಿ ಕಳ್ಳತನ ಪ್ರಕರಣದಲ್ಲಿ ಬೆಂಗಳೂರು ತಿಲಕ್ ನಗರದ ಅಜೀಜ್ ಮತ್ತು ಮೊಯಿನ್ ಖಾನ್ ಎಂಬುವವರನ್ನು ಬಂಧಿಸಲಾಗಿದೆ. ಆರೋಪಿತರು ಕಳುವಾದ ಲಾರಿಯನ್ನು ಬನ್ನೇರುಘಟ್ಟದ ಗುಜರಿ ಅಂಗಡಿಗೆ ಮಾರಾಟ ಮಾಡಿಕೊಂಡಿದ್ದು, ಅದರಿಂದ ಪಡೆದ ₹3 ಲಕ್ಷ ಮೊತ್ತವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಈ ಪ್ರಕರಣಗಳಲ್ಲಿ ಪರಿಣಾಮಕಾರಿ ತನಿಖೆ ನಡೆಸಿದ ಪೊಲೀಸ್ ತಂಡದ ಸದಸ್ಯರಾದ ಸಬ್ ಇನ್‌ಸ್ಪೆಕ್ಟರ್ ಸುನೀಲ್ ಕುಮಾರ್, ಪಿ. ಮುನಿರತ್ನಂ, ವೆಂಕಟರವಣ, ನಾಗೇಶ್, ಕೃಷ್ಣಪ್ಪ, ಶ್ರೀನಾಥ್, ಶ್ರೀಪತಿ, ಖದೀರ್ ಅಹಮದ್, ಮೋಹನ್ ಕುಮಾರ್, ವೆಂಕಟಶಿವ, ಶಂಕರಪ್ಪ, ನೂರ್ ಭಾಷಾ, ರವಿಕುಮಾರ್, ಮುರಳಿಕೃಷ್ಣ ಅವರಿಗೆ ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ಪ್ರಶಂಸಾ ಪತ್ರ ನೀಡಲಾಯಿತು.

For Daily Updates WhatsApp ‘HI’ to 7406303366

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.
Captcha verification failed!
CAPTCHA user score failed. Please contact us!
error: Content is protected !!