31.8 C
Bengaluru
Saturday, February 28, 2026

ಚಿಕ್ಕಬಳ್ಳಾಪುರದಲ್ಲಿ ಮೇ 27–28 ರಂದು 10ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ

- Advertisement -
- Advertisement -

Chikkaballapur : ಚಿಕ್ಕಬಳ್ಳಾಪುರದ ಬೆಂಗಳೂರು ರಸ್ತೆಯಲ್ಲಿರುವ ಕನ್ನಡ ಭವನದಲ್ಲಿ ಈ ವರ್ಷದ 10ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಮೇ 27 (ಮಂಗಳವಾರ) ಮತ್ತು ಮೇ 28 (ಬುಧವಾರ)ರಂದು ವಿಜೃಂಭಣೆಯಿಂದ ಆಯೋಜಿಸಲಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ ತಾಲ್ಲೂಕು ಘಟಕದ ಅಧ್ಯಕ್ಷ ಎನ್.ವಿ. ಶ್ರೀನಿವಾಸನ್ ತಿಳಿಸಿದ್ದಾರೆ.

ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಸಮ್ಮೇಳನವನ್ನು ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಸಾಹಿತ್ಯ ಪರಿಷತ್ ಸಂಯುಕ್ತವಾಗಿ ಆಯೋಜಿಸುತ್ತಿದ್ದು, 27ರ ಬೆಳಗ್ಗೆ ಧ್ವಜಾರೋಹಣ ಹಾಗೂ ಮೆರವಣಿಗೆಯೊಂದಿಗೆ ಸಮ್ಮೇಳನ ಶುಭಾರಂಭವಾಗಲಿದೆ ಎಂದರು.

ಸಮ್ಮೇಳನ ಉದ್ಘಾಟನಾ ಕಾರ್ಯಕ್ರಮದಲ್ಲಿ ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ. ಸುಧಾಕರ್ ರಾಷ್ಟ್ರಧ್ವಜ, ಶಾಸಕ ಪ್ರದೀಪ್ ಈಶ್ವರ್ ನಾಡಧ್ವಜ ಹಾಗೂ ಕೋಡಿರಂಗಪ್ಪ ಪರಿಷತ್ತಿನ ಧ್ವಜ ಹಾರಿಸುತ್ತಾರೆ. ಅಂಬೇಡ್ಕರ್ ಭವನದ ಬಳಿ ನಡೆದ ಮೆರವಣಿಗೆಗೆ ಡಾ. ಸುಧಾಕರ್ ಚಾಲನೆ ನೀಡಲಿದ್ದಾರೆ.

ಕನ್ನಡ ಭವನದ ವೇದಿಕೆಯಲ್ಲಿ ಆದಿಚುಂಚನಗಿರಿ ಮಹಾಸಂಸ್ಥಾನದ ಪೀಠಾಧ್ಯಕ್ಷ ನಿರ್ಮಲಾನಂದನಾಥ ಸ್ವಾಮೀಜಿ ಉದ್ಘಾಟನೆ ನೆರವೇರಿಸಲಿದ್ದಾರೆ. ಈ ವೇಳೆ ಸಂಗಪ್ಪ ಶಿವರಾಜ ತಂಗಡಗಿ, ಸಂಸದ ಡಾ. ಕೆ. ಸುಧಾಕರ್, ಜಿಲ್ಲೆದ ಶಾಸಕರು, ಪರಿಷತ್ ಸದಸ್ಯರು, ಸಾಹಿತ್ಯ ಪ್ರೇಮಿಗಳು ಮತ್ತು ಅಧಿಕಾರಿಗಳು ಪಾಲ್ಗೊಳ್ಳಲಿದ್ದಾರೆ.

ಮೇ 27ರ ಕಾರ್ಯಕ್ರಮಗಳು:

  • ವಚನ ಸಾಹಿತ್ಯ ಚರ್ಚೆ, ಕವಿಗೋಷ್ಠಿ, ‘ಕನ್ನಡ ದೀಪ ಧ್ವನಿಸುರಳಿ’ ಬಿಡುಗಡೆ
  • ಸಂಜೆ: ಸಂಗೀತ-ನೃತ್ಯ ಸಂಜೆ
  • ರಾತ್ರಿ 7 ರಿಂದ 8.30ರ ವರೆಗೆ: ರಾಷ್ಟ್ರಕವಿ ಕುವೆಂಪು ರಚಿಸಿದ ‘ಮಹಾರಾತ್ರಿ’ ನಾಟಕ ಪ್ರದರ್ಶನ

ಮೇ 28ರ ಕಾರ್ಯಕ್ರಮಗಳು:

  • ಬೆಳಗ್ಗೆ 9.30–10.30: ಡಾ. ರಾಜಕುಮಾರ್ ಅವರ ಕನ್ನಡ ಸಂಸ್ಕೃತಿಗೆ ಕೊಡುಗೆ
  • 10.30–12.00: ಕೃಷಿ ಕ್ಷೇತ್ರದ ಸವಾಲುಗಳು
  • 12.00–1.30: ಕೆಳಹಂತದ ಮಹಿಳೆಯರ ಸ್ಥಿತಿ ಹಾಗೂ ಸಬಲೀಕರಣ
  • 2.30–4.00: ಕನ್ನಡ ಗೀತೆಗಳ ಗಾಯನ

ಸಮ್ಮೇಳನ ಸಮಾರೋಪದಲ್ಲಿ ನಿರ್ಣಯ ಮಂಡನೆ, ಸಾಧಕರಿಗೆ ಸನ್ಮಾನ ಹಾಗೂ ಪ್ರತಿಭಾಪುರಸ್ಕಾರ ವಿತರಣೆ ನಡೆಯಲಿದೆ.

For Daily Updates WhatsApp ‘HI’ to 7406303366

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!
error: Content is protected !!