24.7 C
Bengaluru
Saturday, January 25, 2025

ಚಿಂತಾಮಣಿ: ಖಾಸಗಿ ಬಸ್‌ಗಳ ಪೈಪೋಟಿ – ಡಿಕ್ಕಿ, ಪ್ರಯಾಣಿಕರಿಗೆ ಗಾಯ

- Advertisement -
- Advertisement -

Chintamani : ಚಿಂತಾಮಣಿಯ ಜೋಡಿ ರಸ್ತೆಯಲ್ಲಿ ಸೋಮವಾರ ಎರಡು ಖಾಸಗಿ ಬಸ್‌ಗಳು ಪರಸ್ಪರ ಪೈಪೋಟಿಯಿಂದ ಆಗಿದ ಡಿಕ್ಕಿ ಪರಿಣಾಮ ಕೆಲ ಪ್ರಯಾಣಿಕರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ. ಅತಿವೇಗ ಮತ್ತು ಅಜಾಗರೂಕ ಚಾಲನೆ ಘಟನೆಯಲ್ಲಿ ಪ್ರಮುಖ ಕಾರಣವಾಗಿದ್ದು, ಅಪಘಾತದ ತೀವ್ರತೆಯನ್ನು ರಸ್ತೆಯ ಉಬ್ಬು ತಡೆಗಟ್ಟಿತು.

ಬಸ್‌ಗಳ ಸ್ಪರ್ಧೆ: ‘ನೀನು ಮುಂದು, ನಾನು ಮುಂದು’

ಬೆಂಗಳೂರು–ಚಿಂತಾಮಣಿ–ಮುರುಗಮಲ್ಲ ಮಾರ್ಗದಲ್ಲಿ ಸಂಚರಿಸುತ್ತಿದ್ದ ಎಂಬಿಎಸ್ ಮತ್ತು ಕಲ್ಪವೃಕ್ಷ ಬಸ್‌ಗಳ ಚಾಲಕರು ಪರಸ್ಪರ ಮುನ್ನಡೆ ಸಾಧಿಸಲು ಪೈಪೋಟಿ ನಡೆಸಿದರು. ಚಿಂತಾಮಣಿ ನಗರ ಪ್ರವೇಶಿಸುವವರೆಗೆ ಮುಂದುವರೆದ ಈ ಸ್ಪರ್ಧೆ ಜೋಡಿ ರಸ್ತೆಯ ಶನಿಮಹಾತ್ಮ ದೇವಾಲಯದ ಬಳಿ ಸಂಭವಿಸಿದ ಅಪಘಾತಕ್ಕೆ ದಾರಿಯಾಯಿತು.

ರಸ್ತೆ ಉಬ್ಬ ಬಳಿ ಹಿಂದಿನ ಬಸ್‌ ಮುಂದೆ ಬರುವ ಪ್ರಯತ್ನದಲ್ಲಿ, ಕಲ್ಪವೃಕ್ಷ ಬಸ್ ಎಂಬಿಎಸ್ ಬಸ್‌ನ ಹಿಂಭಾಗಕ್ಕೆ ಡಿಕ್ಕಿ ಹೊಡೆದಿತು. ಬಸ್‌ ಒಳಗಿದ್ದ ಹಲವರಿಗೆ ಸಣ್ಣ ಗಾಯಗಳಾಗಿದ್ದು, ಬಸ್‌ನ ಮುಂಭಾಗದ ಗಾಜು ಸಂಪೂರ್ಣ ಪುಡಿಪುಡಿಯಾಯಿತು.

ಪ್ರಯಾಣಿಕರ ಆಕ್ರೋಶ

ಗಾಯಗೊಂಡ ಪ್ರಯಾಣಿಕರು ಬಸ್ ಚಾಲಕ ಮತ್ತು ನಿರ್ವಾಹಕರ ಮೇಲೆ ಆಕ್ರೋಶ ವ್ಯಕ್ತಪಡಿಸಿದರು. “ಪ್ರಯಾಣಿಕರ ಪ್ರಾಣದ ಅಲೆಕ್ಷ್ಯದಿಂದ ಅತಿವೇಗವಾಗಿ ಚಲಾಯಿಸುತ್ತಿದ್ದರು. ನಿರ್ವಾಹಕರೂ ವೇಗವನ್ನು ಹೆಚ್ಚಿಸಲು ಚಾಲಕರ ಮೇಲೆ ಒತ್ತಾಯಿಸುತ್ತಿದ್ದರು,” ಎಂದು ಪ್ರಯಾಣಿಕರು ಆರೋಪಿಸಿದರು.

ಆಕ್ರೋಶಿತ ಪ್ರಯಾಣಿಕರ ಮಾಹಿತಿ ಮೇರೆಗೆ, ಪೊಲೀಸರು ಸ್ಥಳಕ್ಕೆ ಧಾವಿಸಿ ಅಪಘಾತಗೊಂಡ ಬಸ್‌ಗಳನ್ನು ವಶಕ್ಕೆ ಪಡೆದಿದ್ದಾರೆ. ಪ್ರಯಾಣಿಕರು ಬಸ್ ಸಿಬ್ಬಂದಿ ವಿರುದ್ಧ ಕ್ರಮಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.

For Daily Updates WhatsApp ‘HI’ to 7406303366

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.
Captcha verification failed!
CAPTCHA user score failed. Please contact us!
error: Content is protected !!