Gauribidanur : ಗೌರಿಬಿದನೂರು ನಗರ ಬಿಜೆಪಿ ಘಟಕದಿಂದ ಅಯೋಧ್ಯೆಯಲ್ಲಿ (Ayodhya) ಬಾಲರಾಮನ (Baal Raam) ಪ್ರಾಣ ಪ್ರತಿಷ್ಠಾಪನೆ (Pran Pratisth) ಅಂಗವಾಗಿ ತಾಲ್ಲೂಕಿನಿಂದ ಅಯೋಧ್ಯೆ ರಾಮ ಜನ್ಮಭೂಮಿ ಹೋರಾಟದಲ್ಲಿ ಪಾಲ್ಗೊಂಡ ಕರಸೇವಕರನ್ನು (Kara Sevak) ಸನ್ಮಾನಿಸಲಾಯಿತು (Honor).
ಕರಸೇವಕರಾದ ನಗರದ ವಿಶ್ವಾನಂದ ಸರಸ್ವತಿ, ವಾಟದಹೊಸಹಳ್ಳಿ ವಿವೇಕಾನಂದ ರೆಡ್ಡಿ, ಮಂಚೇನಹಳ್ಳಿಯ ಆನಂದತೀರ್ಥ, ತಾರಿದಾಳು ಆನಂದ್, ಅಲಿಪುರರದ ಕೃಷ್ಣಪ್ಪ ಅವರು 1992ರಲ್ಲಿ ರಾಮ ಜನ್ಮಭೂಮಿ ಹೋರಾಟದಲ್ಲಿ ಪಾಲ್ಗೊಂಡಿದ್ದರು.
ನಗರ ಬಿಜೆಪಿ ಘಟಕದ ಅಧ್ಯಕ್ಷ ಮಾರ್ಕೆಟ್ ಮೋಹನ್, ಮುಖಂಡರಾದ ರವಿನಾರಾಯಣ ರೆಡ್ಡಿ, ಬಿಜೆಪಿ ಜಿಲ್ಲಾ ಸಂಘಟನಾ ಪ್ರಧಾನ ಕಾರ್ಯದರ್ಶಿ ಮುರಳೀಧರ್, ಮಾಜಿ ಅಧ್ಯಕ್ಷ ಗೋಪಾಲಗೌಡ, ರಮೇಶ್, ಜಯಣ್ಣ, ಮಂಜುನಾಥ ರಾವ್, ಮಣಿಕಂಠ, ಮಾರುತಿ, ಭರತ್, ಈಶ್ವರ್, ಜಿಟಿಪಿ ಮೋಹನ್, ವಾಸವಿ ಯುವಜನ ಸಂಘದ ಸದಸ್ಯರು ಮತ್ತಿತರರು ಉಪಸ್ಥಿತರಿದ್ದರು.