- Advertisement -
- Advertisement -
- Advertisement -
- Advertisement -
Chikkaballapur : ಚಿಕ್ಕಬಳ್ಳಾಪುರ ನಗರದ ಹೊರವಲಯದ ವೀರಾಂಜನೇಯ ಸ್ವಾಮಿ ದೇಗುಲದಲ್ಲಿ ಕಾರ್ತಿಕ ಅಮಾವಾಸ್ಯೆ ಪ್ರಯುಕ್ತ ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿಯವರು ಹೋಮ, ಅಭಿಷೇಕ ನೆರವೇರಿಸಿ, ಹೋಮ ಕುಂಡಕ್ಕೆ ಪೂರ್ಣಾಹುತಿ ಸಲ್ಲಿಸಿದರು.
ಶುಕ್ರವಾರ ಬೆಳಿಗ್ಗೆಯಿಂದಲೇ ದೇಗುಲಕ್ಕೆ ಅಪಾರ ಸಂಖ್ಯೆಯಲ್ಲಿ ಭಕ್ತರು ಭೇಟಿ ಆಗಮಿಸಿದ್ದರು. ನಂತರ ಮಾತನಾಡಿದ ಸ್ವಾಮೀಜಿ ” ಸನ್ಮಾರ್ಗದಲ್ಲಿ ಮನುಷ್ಯ ನಡೆದರೆ ಎಲ್ಲರಿಗೂ ಒಳಿತು, ಇದರಿಂದ ಅವನ ಉನ್ನತಿಯ ಜತೆ ಸಮಾಜದ ಉನ್ನತಿಯೂ ಸಾಧ್ಯ. ವೀರಾಂಜನೇಯಸ್ವಾಮಿ ಎಲ್ಲರಿಗೂ ಒಳಿತನ್ನು ತರಲಿ ಎಂದು ಹೇಳಿದರು.
ಜಿಲ್ಲಾಧಿಕಾರಿ ಆರ್.ಲತಾ, ಮಾಜಿ ಶಾಸಕ ಬಿ.ಎನ್.ಬಚ್ಚೇಗೌಡ ಇತರರು ಪೂಜೆಯಲ್ಲಿ ಪಾಲ್ಗೊಂಡಿದ್ದರು.
Follow Chikkaballapur District News
Facebook: https://www.facebook.com/hicbpur
Twitter: https://twitter.com/hicbpur
- Advertisement -