16.4 C
Bengaluru
Thursday, February 6, 2025

ಚನ್ನಸೋಮೇಶ್ವರ ಸ್ವಾಮಿ‌‌ ದೇವಾಲಯದಲ್ಲಿ ಲಕ್ಷ ದೀಪೋತ್ಸವ

- Advertisement -
- Advertisement -

Gauribidanur : ಕಾರ್ತಿಕ ಮಾಸದ ಕೊನೆ ಶನಿವಾರದಂದು ಗೌರಿಬಿದನೂರು ತಾಲ್ಲೂಕಿನ ಅಲಕಾಪುರದಲ್ಲಿನ ಚನ್ನಸೋಮೇಶ್ವರ ಸ್ವಾಮಿ‌‌ ದೇವಾಲಯದಲ್ಲಿ ಸ್ಥಳೀಯರು‌ ಹಾಗೂ ಭಕ್ತಾಧಿಗಳ ಸಹಕಾರದಿಂದ ಲಕ್ಷ ದೀಪೋತ್ಸವ ವಿಜೃಂಭಣೆಯಿಂದ ನಡೆಯಿತು. ಶನಿವಾರ ಬೆಳಿಗ್ಗೆಯಿಂದಲೇ ಧಾರ್ಮಿಕ ವಿಧಿ ವಿಧಾನ ಜತೆಗೆ ಪೂಜಾ ಕೈಂಕಾರ್ಯಗಳಲ್ಲಿ ಸಡಗಡದಿಂದ ಪಾಲ್ಗೊಂಡಿದ್ದ ಭಕ್ತರು ಸಂಜೆ 6 ಗಂಟೆಗೆ ದೇವಸ್ಥಾನದ ಆವರಣದಲ್ಲಿ ಶ್ರದ್ಧಾಭಕ್ತಿಯಿಂದ ದೀಪ ಹಚ್ಚುವ ಮೂಲಕ ದೇವರ ಕೃಪೆಗೆ ಪಾತ್ರರಾದರು.

ಧಾರ್ಮಿಕ ಕಾರ್ಯದಲ್ಲಿ ಭಾಗಿಯಾದ ತಹಶೀಲ್ದಾರ್ ಎಚ್.ಶ್ರೀನಿವಾಸ್ ಮಾತನಾಡಿ , ” ಈಚೆಗಷ್ಟೇ ಧಾರ್ಮಿಕ ದತ್ತಿ ಮತ್ತು‌ ಮುಜರಾಯಿ ಇಲಾಖೆ ಹಾಗೂ ದಾನಿಗಳ ಸಹಕಾರದಿಂದಾಗಿ ಚನ್ನಸೋಮೇಶ್ವರ ಸ್ವಾಮಿ‌‌ ದೇವಾಲಯದ ಜೀರ್ಣೋದ್ಧಾರ ಕಾರ್ಯ ನಡೆಸುವ ಮೂಲಕ ಶಿಥಿಲಾವಸ್ಥೆ ಯಲ್ಲಿದ್ದ‌ ದೇವಾಲಯಕ್ಕೆ ಆಧುನಿಕ ಸ್ಪರ್ಶ ನೀಡಲಾಗಿದ್ದು, ಪ್ರತಿ ವರ್ಷದಂತೆ ಈ ಬಾರಿಯೂ ಶ್ರದ್ಧೆ ಮತ್ತು ಭಕ್ತಿಪೂರ್ವಕವಾಗಿ ಸ್ಥಳೀಯರ ಸಹಕಾರದೊಂದಿಗೆ ಲಕ್ಷ ದೀಪೋತ್ಸವ ‌ಕಾರ್ಯ ನಡೆಯುತ್ತಿರುವುದು ಸಂತಸ ವಿಚಾರವಾಗಿದೆ. ಪುರಾತನ ‌ಹಾಗೂ ಧಾರ್ಮಿಕ‌ ನೆಲೆಯೊಂದಿಗೆ ಈ ದೇವಾಲಯದಲ್ಲಿ ದಶಕಗಳಿಂದಲೂ ಸ್ಥಳೀಯರ ‌ಸಹಕಾರದೊಂದಿಗೆ ಭಕ್ತಿಪೂರ್ವಕವಾಗಿ ದೇವತಾ ಕಾರ್ಯ ನಡೆಯುತ್ತಿರುವುದು ವಿಶೇಷವಾಗಿದೆ ” ಎಂದು‌ ಹೇಳಿದರು.

ಕಂದಾಯ ಅಧಿಕಾರಿಗಳಾದ ಜಯಪ್ರಕಾಶ್, ರವಿ, ಶಿವಪ್ರಸಾದ್, ಮುಖಂಡರಾದ ಆರ್.ಪಿ.ಗೋಪಾಲಗೌಡ, ಪ್ರಭಾಕರ್, ಬಿ.ಜಿ.ವೇಣುಗೋಪಾಲರೆಡ್ಡಿ ಪೂಜೆಯಲ್ಲಿ ಪಾಲ್ಗೊಂಡಿದ್ದರು.

For Daily Updates WhatsApp ‘HI’ to 7406303366

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.
Captcha verification failed!
CAPTCHA user score failed. Please contact us!
error: Content is protected !!