Chikkadasenahalli, Sidlaghatta : ಶಿಡ್ಲಘಟ್ಟ ತಾಲ್ಲೂಕಿನ ಚಿಕ್ಕದಾಸೇನಹಳ್ಳಿ ಬಳಿಯ ಕಾಲುವೆಗೆ ಬೈಕ್ (Motorbike Accident) ಸವಾರನೊಬ್ಬ ಬಿದ್ದು ಸ್ಥಳದಲ್ಲೆ ಮೃತಪಟ್ಟಿದ್ದಾನೆ. ದೇವನಹಳ್ಳಿ ತಾಲ್ಲೂಕು ವಿಜಯಪುರ ಹೋಬಳಿಯ ರೆಡ್ಡಹಳ್ಳಿ ವಾಸಿ ಮುನಿರಾಜು(43) ಮೃತಪಟ್ಟ ದುರ್ದೈವಿ.
ತಾಲ್ಲೂಕಿನ ಕುಂದಲಗುರ್ಕಿಯಲ್ಲಿ ಮುನಿರಾಜು ಮದುವೆಯಾಗಿದ್ದು ಕುಂದಲಗುರ್ಕಿಗೆ ಬಂದು ವಾಪಸ್ಸಾಗುವಾಗ ಗುರವಾರ ರಾತ್ರಿ ರಸ್ತೆ ಪಕ್ಕದ ದೊಡ್ಡ ಕಾಲುವೆಗೆ ಬಿದ್ದು ಮೃತಪಟ್ಟಿದ್ದಾನೆ. ಶುಕ್ರವಾರ ಬೆಳಗ್ಗೆ ಈ ಮಾರ್ಗದಲ್ಲಿ ಸಂಚರಿಸುವವರು ನೋಡಿಕೊಂಡಿದ್ದು ಘಟನೆ ಬೆಳಕಿಗೆ ಬಂದಿದೆ. ಶಿಡ್ಲಘಟ್ಟ ಗ್ರಾಮಾಂತರ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
Facebook: https://www.facebook.com/hicbpur
Twitter: https://twitter.com/hicbpur
Your email address will not be published. Required fields are marked *
Save my name, email, and website in this browser for the next time I comment.
2021 Chikkaballapur.com