ಚಿಕ್ಕಬಳ್ಳಾಪುರ: ಗ್ಯಾರಂಟಿ ಯೋಜನೆಗಳಿಗಾಗಿ ಚಿಕ್ಕಬಳ್ಳಾಪುರ ಜಿಲ್ಲೆಗೆ ರಾಜ್ಯ ಸರ್ಕಾರ ಇದುವರೆಗೆ ₹3,232.17 ಕೋಟಿ ವೆಚ್ಚ ಮಾಡಿದೆ ಎಂದು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷ ಹಾಗೂ ಶಾಸಕ ದಿನೇಶ್ ಗೂಳಿಗೌಡ ತಿಳಿಸಿದ್ದಾರೆ.
Quick facts: MLA Dinesh Gooligowda said Chikkaballapur district has received Rs 3,232.17 crore under the five guarantee schemes, praised 97% completion of Gruhalakshmi/Gruhajyothi verification, and said 1,164 ward-level guarantee committee members will be appointed district-wide.
ಜಿಲ್ಲೆಯ ಗ್ಯಾರಂಟಿ ಯೋಜನೆ ಪ್ರಗತಿ ಎಷ್ಟು?
ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಶಾಸಕರು, ಗೃಹಲಕ್ಷ್ಮಿ ಯೋಜನೆಯಡಿ 2,85,415 ಫಲಾನುಭವಿಗಳಿಗೆ ₹1,758.35 ಕೋಟಿ, ಗೃಹಜ್ಯೋತಿಯಡಿ 3,27,756 ಕುಟುಂಬಗಳಿಗೆ ₹454.97 ಕೋಟಿ ಮೌಲ್ಯದ ಉಚಿತ ವಿದ್ಯುತ್, ಅನ್ನಭಾಗ್ಯದಡಿ 10,11,952 ಫಲಾನುಭವಿಗಳಿಗೆ ₹265.29 ಕೋಟಿ ಡಿಬಿಟಿ ಹಾಗೂ ₹254.83 ಕೋಟಿ ಮೌಲ್ಯದ ಆಹಾರ ಧಾನ್ಯ ವಿತರಣೆಯಾಗಿದೆ ಎಂದರು. ಶಕ್ತಿ ಯೋಜನೆಯಡಿ ಪ್ರತಿದಿನ ಸರಾಸರಿ 1.02 ಲಕ್ಷ ಮಹಿಳೆಯರು ಉಚಿತ ಪ್ರಯಾಣ ಮಾಡುತ್ತಿದ್ದು, ಜಿಲ್ಲೆಯ 17,430 ವಿದ್ಯಾರ್ಥಿಗಳಿಗೆ ಉಚಿತ ಬಸ್ ಸೌಲಭ್ಯ ಕಲ್ಪಿಸಲಾಗಿದೆ. ಯುವನಿಧಿಯಡಿ 6,026 ಫಲಾನುಭವಿಗಳಿಗೆ ₹17.16 ಕೋಟಿ ವರ್ಗಾವಣೆಯಾಗಿದೆ.
ಗೃಹಲಕ್ಷ್ಮಿ, ಗೃಹಜ್ಯೋತಿ ಪರಿಷ್ಕರಣೆ ಎಷ್ಟು ಪೂರ್ಣ?
ಗೃಹಲಕ್ಷ್ಮಿಯಡಿ ನೋಂದಾಯಿತ 7,523 ಫಲಾನುಭವಿಗಳು ಮೃತಪಟ್ಟಿದ್ದು, ಈ ಪೈಕಿ 2,845 ಮಂದಿಯ ಖಾತೆಗೆ ಜಮೆಯಾದ ₹3.02 ಕೋಟಿಯಲ್ಲಿ ₹2.24 ಕೋಟಿ ಸರ್ಕಾರಕ್ಕೆ ಮರುಪಾವತಿಯಾಗಿದ್ದು, ₹78.34 ಲಕ್ಷ ಬಾಕಿ ಉಳಿದಿದೆ. ಗೃಹಜ್ಯೋತಿ ಪರಿಷ್ಕರಣೆ ಶೇ.97.45ರಷ್ಟು ಪೂರ್ಣಗೊಂಡಿದ್ದು, 3,24,028 ಗ್ರಾಹಕರ ಪೈಕಿ 3,15,775 ಮಂದಿಯ ಸರ್ವೆ ಮುಗಿದಿದೆ; 51 ಮಂದಿ ಸ್ವಯಂಪ್ರೇರಿತವಾಗಿ ಯೋಜನೆಯಿಂದ ಹೊರಗುಳಿದಿದ್ದಾರೆ.
1,164 ಗ್ಯಾರಂಟಿ ಸಮಿತಿ ಸದಸ್ಯರ ನೇಮಕ ಏಕೆ?
ಪ್ರತಿ ಗ್ರಾಮ ಪಂಚಾಯತಿ, ನಗರಸಭೆ, ಪುರಸಭೆ ಮತ್ತು ಪಟ್ಟಣ ಪಂಚಾಯತಿ ವಾರ್ಡ್ಗಳಲ್ಲಿ 6 ಸದಸ್ಯರ ಗ್ಯಾರಂಟಿ ಸಮಿತಿ ರಚಿಸುವಂತೆ ಮುಖ್ಯಮಂತ್ರಿಗಳ ಸೂಚನೆಯಂತೆ, ಜಿಲ್ಲೆಯ 154 ಗ್ರಾಮ ಪಂಚಾಯತಿ, 4 ನಗರಸಭೆ, 1 ಪುರಸಭೆ ಹಾಗೂ 3 ಪಟ್ಟಣ ಪಂಚಾಯತಿ ವ್ಯಾಪ್ತಿಯ 194 ವಾರ್ಡ್ಗಳಲ್ಲಿ ಒಟ್ಟು 1,164 ಸದಸ್ಯರನ್ನು ಶೀಘ್ರದಲ್ಲೇ ನೇಮಕ ಮಾಡಲಾಗುವುದು ಎಂದು ಶಾಸಕರು ತಿಳಿಸಿದರು. ಪ್ರತಿ ಸಮಿತಿಯಲ್ಲಿ ಎಸ್ಸಿ/ಎಸ್ಟಿ-1, ಅಲ್ಪಸಂಖ್ಯಾತರು-1, ಮಹಿಳೆಯರು-2, ಹಿಂದುಳಿದ ವರ್ಗ-1 ಹಾಗೂ ಸಾಮಾನ್ಯ ವರ್ಗ-1 ಸದಸ್ಯರಿಗೆ ಪ್ರಾತಿನಿಧ್ಯ ಕಲ್ಪಿಸಲಾಗುತ್ತಿದೆ.
100 ಹೆಚ್ಚುವರಿ ಬಸ್ಗೆ ಮನವಿ
ಚಿಕ್ಕಬಳ್ಳಾಪುರ ಜಿಲ್ಲೆಗೆ 100 ಹೆಚ್ಚುವರಿ ಬಸ್ ನೀಡುವಂತೆ ಡಿಪೋ ಮ್ಯಾನೇಜರ್ ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ರಾಜ್ಯದಲ್ಲಿ 4,500 ಹೊಸ ಬಸ್ ಖರೀದಿಗೆ ಸರ್ಕಾರ ₹7,000 ಕೋಟಿ ಹಾಗೂ ಬಸ್ ನಿರ್ವಹಣೆಗೆ ₹2,000 ಕೋಟಿ ಬಿಡುಗಡೆ ಮಾಡಿದೆ. ಸಭೆಯಲ್ಲಿ ಜಿಲ್ಲಾಧಿಕಾರಿ ಜಿ.ಪ್ರಭು, ಜಿಲ್ಲಾ ಪಂಚಾಯತ್ ಸಿಇಒ ಡಾ.ನವೀನ್ ಭಟ್, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಯಲವಳ್ಳಿ ರಮೇಶ್ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
ಪದೇ ಪದೇ ಕೇಳಲಾಗುವ ಪ್ರಶ್ನೆಗಳು (FAQ)
Stay tuned for more local updates.
