Chintamani : ಚಿಂತಾಮಣಿಯ ಹಿಂದಿಗನಾಳ ಸಮೀಪ ಸೋಮವಾರ ದ್ವಿಚಕ್ರವಾಹನಕ್ಕೆ ಕಾರು ಡಿಕ್ಕಿ (Bike Accident) ಹೊಡೆದ ಪರಿಣಾಮ ಚಿಂತಾಮಣಿ ತಾಲ್ಲೂಕಿನ ಯಗವಕೋಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೊಂಡವೆನಕಪಲ್ಲಿ ಗ್ರಾಮದ ಕಿರಣ್ (21) ಸ್ಥಳದಲ್ಲೇ ಮೃತಪಟ್ಟಿದ್ದಾನೆ (Death). ಈ ಘಟನೆಯಲ್ಲಿ ಗಿರೀಶ್ ಮತ್ತು ನವೀನ್ ಗಾಯಗೊಂಡಿದ್ದು (injured), ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ನಂದಗುಡಿ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.
ಕೊಂಡವೆನಕಪಲ್ಲಿ ಗ್ರಾಮದ ಮೂವರು ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದು ಪ್ರತಿ ಶನಿವಾರ ಸ್ವಗ್ರಾಮಕ್ಕೆ ಬಂದು ಸೋಮವಾರ ಹೋಗುತ್ತಿದ್ದರು. ಈ ಪ್ರಕಾರ ಸೋಮವಾರ ದ್ವಿಚಕ್ರವಾಹನದಲ್ಲಿ ಬೆಂಗಳೂರಿಗೆ ಹೋಗುತ್ತಿದ್ದಾಗ ಈ ಅಪಘಾತ ಸಂಭವಿಸಿತ್ತು.