Home News Chintamani ಸಾಂಕ್ರಾಮಿಕ ಕಾಯಿಲೆಗಳ ಅರಿವು: ಬೀದಿ ನಾಟಕ

ಸಾಂಕ್ರಾಮಿಕ ಕಾಯಿಲೆಗಳ ಅರಿವು: ಬೀದಿ ನಾಟಕ

0
Chintamani Rashtriya Arogya Abhiyan Street Play

Chintamani : ಚಿಕ್ಕಬಳ್ಳಾಪುರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ರಾಷ್ಟ್ರೀಯ ಆರೋಗ್ಯ ಅಭಿಯಾನ (Rashtriya Arogya Abhiyan) ಕಾರ್ಯಕ್ರಮಗಳ ಕುರಿತು ಬುಧವಾರ ಚಿಂತಾಮಣಿ ನಗರದ ಶಾಂತಿನಗರದಲ್ಲಿ ಸಿದ್ಧಾರ್ಥ ಕಲಾ ತಂಡವು ಜನಜಾಗೃತಿ ಬೀದಿ ನಾಟಕ (Street Play) ಹಮ್ಮಿಕೊಳ್ಳಲಾಗಿತ್ತು.

ಈ ಸಂದರ್ಭದಲ್ಲಿ ಸಿದ್ಧಾರ್ಥ ಕಲಾ ತಂಡದ ಕಲಾವಿದರು ಮಾರಕ ಹಾಗೂ ಸಾಂಕ್ರಾಮಿಕ ಕಾಯಿಲೆಗಳಾದ ಕ್ಷಯ, ಕುಷ್ಠರೋಗ, ಎಚ್ಐವಿ, ಮಾದಕ ಪದಾರ್ಥಗಳ ಬಳಕೆಯಿಂದ ಆಗುವ ದುಷ್ಟರಿಣಾಮಗಳು, ಸರ್ಕಾರಿ ಆಸ್ಪತ್ರೆಗಳಲ್ಲಿ ದೊರೆಯುವ ಚಿಕಿತ್ಸಾ ಸೌಲಭ್ಯಗಳ ಕುರಿತು ಬೀದಿ ನಾಟಕದ ಮೂಲಕ ಜನರಲ್ಲಿ ಜಾಗೃತಿ ಮೂಡಿಸಿದರು.

ಈ ಸಂದರ್ಭದಲ್ಲಿ ನಗರ ಆರೋಗ್ಯ ವೈದ್ಯಾಧಿಕಾರಿ ಡಾ.ಬಸವ ಮಂಜೇಶ್, ಕಲಾತಂಡದ ಮಂಜುನಾಥ್, ಗೊಲ್ಲಹಳ್ಳಿ ಕೃಷ್ಣಪ್ಪ, ಸಿದ್ಧಾರ್ಥ, ನಗರ ಆರೋಗ್ಯ ಕೇಂದ್ರದ ಹಿರಿಯ ಆರೋಗ್ಯ ನಿರೀಕ್ಷಕ ಸತೀಶ್, ಕಿರಿಯ ಆರೋಗ್ಯ ನಿರೀಕ್ಷಕ ಪ್ರಜ್ವಲ ಯಾದವ್ ಮತ್ತಿತರರು ಉಪಸ್ಥಿತರಿದ್ದರು.

For Daily Updates WhatsApp ‘HI’ to 7406303366

NO COMMENTS

LEAVE A REPLY

Please enter your comment!
Please enter your name here

error: Content is protected !!
Exit mobile version