Chintamani : ವಿಶ್ವ ಸಂಸ್ಕೃತ ದಿನಾಚರಣೆ (World Sanskrit Day) ಪ್ರಯುಕ್ತ ಚಿಂತಾಮಣಿ ತಾಲ್ಲೂಕಿನ ಗುನ್ನಹಳ್ಳಿಯಲ್ಲಿ ಸೋಮವಾರ ಸಂಸ್ಕೃತೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅಭ್ಯುದಯ ಸಂಸ್ಥೆಯ ವೇಣುಗೋಪಾಲ್ “ಸಂಸ್ಕೃತ ಕಲಿಕೆಯಿಂದ ವೇದಪುರಾಣಗಳ ಜ್ಞಾನ ಅರಿಯಬಹುದು. ಗುನ್ನಹಳ್ಳಿ ಎಂಬ ಸಣ್ಣ ಗ್ರಾಮದಲ್ಲಿ ಮಕ್ಕಳು ಶುದ್ಧವಾಗಿ ಸಂಸ್ಕೃತ ಭಾಷೆ ಮಾತನಾಡುತ್ತಾರೆ. ಸಂಸ್ಕೃತದಲ್ಲಿರುವ ಹಲವಾರು ಶ್ಲೋಕಗಳ ಭಾವಾರ್ಥ ತಿಳಿಯುತ್ತಾರೆ” ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಸಂಸ್ಕೃತ ವಿಶ್ವವಿದ್ಯಾಲಯದ ಸಂಶೋಧನಾ ಸಹಾಯಕ ನಿರ್ದೇಶಕ ನಾರಾಯಣಸ್ವಾಮಿ, ಪ್ರವಚನಕಾರ ತಳಗವಾರ ಆನಂದ್, ಗ್ರಾಮದ ಸಂಸ್ಕೃತ ಶಿಕ್ಷಕ ಮಂಜು ನಾಥ್, ವೆಂಕಟರೆಡ್ಡಿ , ಯತಿಶ್ರೀ ಮತ್ತು ಅಪಾರ ಸಂಖ್ಯೆಯಲ್ಲಿ ಪೋಷಕರು ಭಾಗವಹಿಸಿದ್ದರು
