Gauribidanur : ಭಾನುವಾರ ಗೌರಿಬಿದನೂರು ತಾಲ್ಲೂಕಿನ ಕೋಟಾಲದಿನ್ನೆಯಲ್ಲಿ KHP ಫೌಂಡೇಷನ್ ವತಿಯಿಂದ ಕಂಪ್ಯೂಟರ್ ಮತ್ತು ಹೊಲಿಗೆ ಯಂತ್ರ ತರಬೇತಿ (Computer & Tailoring Training Center) ಕೇಂದ್ರವನ್ನು ಆರಂಭಿಸಲಾಯಿತು.
ತರಬೇತಿ ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿದ ಮುಖಂಡರಾದ ಕೆ.ಎಚ್.ಪುಟ್ಟಸ್ವಾಮಿಗೌಡ “ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಪಠ್ಯ ವಿಷಯಗಳ ಜತೆಗೆ ಕಂಪ್ಯೂಟರ್ ಜ್ಞಾನ ಅತ್ಯವಶ್ಯವಾಗಿದ್ದು ತಾಲ್ಲೂಕಿನ ಎಲ್ಲ ವಿದ್ಯಾರ್ಥಿಗಳಿಗೆ KHP ಫೌಂಡೇಷನ್ ವತಿಯಿಂದ ಉಚಿತ ನೆರವು ನೀಡಲಾಗುವುದು” ಎಂದು ತಿಳಿಸಿದರು.
ಮಾಜಿ ಜಿ.ಪಂ ಅಧ್ಯಕ್ಷರಾದ ಎಚ್.ವಿ.ಮಂಜುನಾಥ್, ಮುಖಂಡರಾದ ಜೆ.ಕಾಂತರಾಜು, ಅನಂತರಾಜು, ಎಂ.ನರಸಿಂಹಮೂರ್ತಿ, ರಾಘವೇಂದ್ರ ಹನುಮಾನ್, ಅಬ್ದುಲ್ಲಾ, ಎಂ.ಬಲರಾಂ, ಸತೀಶ್, ಆರ್.ಪಿ.ಗೋಪಾಲಗೌಡ, ಕೆ.ಪಿ.ಹನುಮಂತರಾಯಪ್ಪ, ಲಕ್ಷ್ಮಣರಾವ್, ಕಿಮ್ಲಾನಾಯಕ್, ಗಂಗಾಧರಪ್ಪ, ಮುನಿಯಪ್ಪ, ನಾಗರಾಜ್, ಕುರೂಡಿ ರಾಕೇಶ್, ಅಂಬರೀಶ್ ಯಾದವ, ಶ್ರೀನಾಥ್, ವೆಂಕಟೇಶ್, ತಿಮ್ಮೇಗೌಡ, ಅಶ್ವತ್ಥಪ್ಪ, ಛಾಯಾನಾಥ್, ಮರಳೂರು ಗೋಪಾಲ್, ಕಾಂತರಾಜ್, ಹರೀಶ್, ಸತೀಶ್, ನಾಗಾರ್ಜುನ, ಪವನರೆಡ್ಡಿ ಉಪಸ್ಥಿತರಿದ್ದರು.
For Daily Updates WhatsApp ‘HI’ to 7406303366
Follow Chikkaballapur District News
Facebook: https://www.facebook.com/hicbpur
Twitter: https://twitter.com/hicbpur