Home Chikkaballapur ಸರ್ಕಾರಿ ನೌಕರರ ಬೃಹತ್ ಸಮ್ಮೇಳನದಲ್ಲಿ ಭಾಗವಹಿಸಲು ತೆರಳಿದ ಜಿಲ್ಲೆಯ ಸರ್ಕಾರಿ ನೌಕರರು

ಸರ್ಕಾರಿ ನೌಕರರ ಬೃಹತ್ ಸಮ್ಮೇಳನದಲ್ಲಿ ಭಾಗವಹಿಸಲು ತೆರಳಿದ ಜಿಲ್ಲೆಯ ಸರ್ಕಾರಿ ನೌಕರರು

0

Chikkaballapur : ರಾಜ್ಯ ಸರ್ಕಾರಿ ನೌಕರರ ಕೇಂದ್ರ ಸಮಿತಿ ಬೆಂಗಳೂರಿನ ಅರಮನೆ ಮೈದಾನದಲ್ಲಿ ಹಮ್ಮಿಕೊಂಡಿರುವ ಸರ್ಕಾರಿ ನೌಕರರ ಬೃಹತ್ ಸಮ್ಮೇಳನದಲ್ಲಿ (Government Employees Conference) ಭಾಗವಹಿಸಲು ಜಿಲ್ಲೆಯಾದ್ಯಂತ ಅನೇಕ ಬಸ್ ಗಳಲ್ಲಿ ಸರ್ಕಾರಿ ನೌಕರರು ತೆರಳಿದರು. ಜಿಲ್ಲೆಯ ಸರ್ಕಾರಿ ನೌಕರರು

ಚಿಂತಾಮಣಿ :

ಚಿಂತಾಮಣಿಯಿಂದ ಹೊರಟ ನೌಕರರ ಬಸ್‌ಗೆ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಎಸ್.ಆನಂದ್, ಪೌರಾಯುಕ್ತ ಜಿ.ಎನ್.ಚಲಪತಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಶೋಕ ಕುಮಾರ್, ತಾಲ್ಲೂಕು ಘಟಕದ ಅಧ್ಯಕ್ಷ ಕೆ.ರವಣಪ್ಪ, ಗೃಹ ನಿರ್ಮಾಣ ಸಹಕಾರ ಸಂಘದ ಅಧ್ಯಕ್ಷ ಪ್ರಕಾಶ ರೆಡ್ಡಿ, ನೌಕರರ ವಿವಿಧ ವೃಂದಗಳ ಪದಾಧಿಕಾರಿಗಳು ಹಾಗೂ ನೌಕರರು ಚಾಲನೆ ನೀಡಿದರು.

ಶಿಡ್ಲಘಟ್ಟ :

Government Employees Conference Sidlaghatta

ಸರ್ಕಾರಿ ನೌಕರರ ಸಂಘದ ಸದಸ್ಯರು ಮಂಗಳವಾರ ನಗರದ ಕೋಟೆ ವೃತ್ತದಿಂದ ನೌಕರರ ಬೃಹತ್ ಸಮ್ಮೇಳನದಲ್ಲಿ ಭಾಗವಹಿಸಲು ಬೆಂಗಳೂರಿಗೆ ತೆರಳಿದರು.

ಗೌರಿಬಿದನೂರು :

ಬೆಂಗಳೂರಿನಲ್ಲಿ ಮಂಗಳವಾರ ನಡೆದ ರಾಜ್ಯಮಟ್ಟದ ಬೃಹತ್‌ ಸರ್ಕಾರಿ ನೌಕರರ ಸಮ್ಮೇಳನಕ್ಕೆ ಗೌರಿಬಿದನೂರು ತಾಲ್ಲೂಕು ಸರ್ಕಾರಿ ನೌಕರರು ತೆರಳಿದರು.

For Daily Updates WhatsApp ‘HI’ to 7406303366

NO COMMENTS

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.

The reCAPTCHA verification period has expired. Please reload the page.

error: Content is protected !!
Exit mobile version