Home News Chintamani ಕೃಷ್ಣದೇವರಾಯರ ರಥಕ್ಕೆ ಚಾಲನೆ

ಕೃಷ್ಣದೇವರಾಯರ ರಥಕ್ಕೆ ಚಾಲನೆ

0
Krishnadevaraya Ratha inauguration Kaiwara

Chintamani : ಕೃಷ್ಣದೇವರಾಯರ (Krishnadevaraya) 555ನೇ ಜಯಂತೋತ್ಸವ ಅಂಗವಾಗಿ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಸಂಚರಿಸುವ ಕೃಷ್ಣದೇವರಾಯರ ರಥಕ್ಕೆ (Ratha) ಕೈವಾರ ಯೋಗಿನಾರೇಯಣ ಮಠದ ಧರ್ಮಾಧಿಕಾರಿ ಎಂ.ಆರ್.ಜಯರಾಮ್ (M R Jayaram) ಭಾನುವಾರ ಚಾಲನೆ ನೀಡಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಕರ್ನಾಟಕ ರಾಜ್ಯ ಬಲಿಜ ಯುವಶಕ್ತಿ ಬಳಗದ ಅಧ್ಯಕ್ಷ ಕೆ.ಟಿ.ರಾಜಕುಮಾರ್ “ವಿಜಯನಗರ ಸಾಮ್ರಾಜ್ಯದ ಸಾಮ್ರಾಟ್ ಶ್ರೀಕೃಷ್ಣದೇವರಾಯರ ಜಯಂತೋತ್ಸವ ಪ್ರಯುಕ್ತ ರಥವನ್ನು ಆಯೋಜಿಸಲಾಗಿದ್ದು ಈ ರಥವು ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು ಹಾಗೂ ಬೆಂಗಳೂರು ಜಿಲ್ಲೆಗಳಲ್ಲಿ ಸಂಚರಿಸಲಿದೆ. ಫೆಬ್ರವರಿ 16ರಂದು ಬೆಂಗಳೂರಿನ ಕೆ.ಆರ್.ಪುರಂ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ರಾಜೀವ್‌ ಗಾಂಧಿ ಆಟದ ಮೈದಾನದಲ್ಲಿ‌ ಸಮಾವೇಶ ಹಮ್ಮಿಕೊಳ್ಳಲಾಗಿದೆ” ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಯೋಗಿನಾರೇಯಣ ಮಠದ ಸಂಕೀರ್ತನಾ ಯೋಜನೆ ಸಂಚಾಲಕ ವಾನರಾಶಿ ಬಾಲಕೃಷ್ಣ ಭಾಗವತರ್, ಸದಸ್ಯರಾದ ಗಣೇಶ್ ಚಂದ್ರಪ್ಪ, ಕೋಲಾರದ ಸುರೇಶ್‌ ಬಾಬು, ಆರ್.ಸುರೇಂದ್ರ ಬಾಬು, ವಿನಯ್ ಕನಕನಾಲ್ ಉಪಸ್ಥಿತರಿದ್ದರು.

For Daily Updates WhatsApp ‘HI’ to 7406303366

NO COMMENTS

LEAVE A REPLY

Please enter your comment!
Please enter your name here

error: Content is protected !!
Exit mobile version