- Advertisement -
- Advertisement -
- Advertisement -
- Advertisement -
Chintamani : ಶನಿವಾರ ಚಿಂತಾಮಣಿಯ ಕನಂಪಲ್ಲಿಯ ಓಟಿಕೆರೆ ಅಭಿವೃದ್ಧಿ ಯೋಜನೆಯ ಕಾಮಗಾರಿಗೆ ಸಚಿವ ಡಾ.ಎಂ.ಸಿ.ಸುಧಾಕರ್ (Dr. MC Sudhakar) ಚಾಲನೆ (Initiated work of the project) ನೀಡಿದರು.
ಈ ಸಂದರ್ಭದಲ್ಲಿ ಮಾತಾನಾಡಿದ ಸಚಿವರು “ಚಿಂತಾಮಣಿ-ಹೊಸಕೋಟೆಯ ಕೆ.ಶಿಪ್ ರಸ್ತೆಯ ನಿರ್ಮಾಣ ಸಮಯದಲ್ಲೇ ಕೆರೆಯ ಅಭಿವೃದ್ಧಿ ಯೋಜನೆ ರೂಪಿಸಲಾಗಿತ್ತು. ₹50 ಲಕ್ಷ ವೆಚ್ಚದಲ್ಲಿ ಹೂಳು ತೆಗೆಸಲಾಗಿತ್ತು. ಪಕ್ಕದಲ್ಲಿರುವ ಯಾದವ ವಿದ್ಯಾರ್ಥಿನಿಲಯವಿರುವ ಸ್ಥಳವೂ ಕೋಡಿಯ ಭಾಗವಾಗಿತ್ತು. ಯಾದವ ವಿದ್ಯಾರ್ಥಿನಿಲಯಕ್ಕೆ ಯಾವುದೇ ತೊಂದರೆ ಆಗಬಾರದು ಎಂದು ಕೆರೆಯ ಕೋಡಿಯನ್ನು ಹೊಸದಾಗಿ ರೂಪಿಸಲಾಗಿತ್ತು” ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ನೀರಾವರಿ ಇಲಾಖೆ ಅಧಿಕಾರಿಗಳು, ಮುಖಂಡ ಮೀಸೆವೆಂಕಟರೆಡ್ಡಿ, ಮುಖಂಡರು ಭಾಗವಹಿಸಿದ್ದರು.
For Daily Updates WhatsApp ‘HI’ to 7406303366
- Advertisement -