Home Sidlaghatta ಭಗೀರಥ ಹಾಗೂ ಹೇಮರೆಡ್ಡಿ ಮಲ್ಲಮ್ಮ ಜಯಂತಿ ಆಚರಣೆ

ಭಗೀರಥ ಹಾಗೂ ಹೇಮರೆಡ್ಡಿ ಮಲ್ಲಮ್ಮ ಜಯಂತಿ ಆಚರಣೆ

0
Bhagiratha Hemareddy Mallamma Jayanti

Sidlaghatta : ಶಿಡ್ಲಘಟ್ಟ ನಗರದ ತಾಲ್ಲೂಕು ಕಚೇರಿಯ (Taluk Office) ಸಭಾಂಗಣದಲ್ಲಿ ಬುಧವಾರ ಭಗೀರಥ (Bhagiratha) ಹಾಗೂ ಹೇಮರೆಡ್ಡಿ ಮಲ್ಲಮ್ಮ ಜಯಂತಿಯನ್ನು (Hemareddy Mallamma Jayanti) ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯ ವತಿಯಿಂದ ಆಚರಿಸಲಾಯಿತು

ತಹಶೀಲ್ದಾರ್‌ ಬಿ.ಎಸ್.ರಾಜೀವ್‌ (Tehsildar B. S. Rajiv) ರವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ, ನಿವೃತ್ತ ಶಿಕ್ಷಕ ಅಶ್ವತ್ಥ ನಾರಾಯಣ ಭಗೀರಥ ಮತ್ತು ಹೇಮರೆಡ್ಡಿ ಮಲ್ಲಮ್ಮ ರವರ ಬಗ್ಗೆ ಹಾಗೂ ಉಪ್ಪಾರ ಜನಾಂಗದ ಬಗ್ಗೆ ಸವಿಸ್ತಾರವಾಗಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ಜನಾಂಗದ SSLC ಮತ್ತು PUC ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನ ಮಾಡಲಾಯಿತು.

ನಗರಸಭೆ ಪೌರಾಯುಕ್ತ ಶ್ರೀಕಾಂತ್, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ವೆಂಕಟೇಶ್ ಮೂರ್ತಿ, BEO ರಘುನಾಥರೆಡ್ಡಿ, ಜಿಲ್ಲಾ ಭಗೀರಥ ಮಹಾಸಭೆಯ ಅಧ್ಯಕ್ಷ ಜಯರಾಂ, ಗಂಗಪ್ಪ, ಕುಮಾರ್‌, ದ್ಯಾವಪ್ಪ, ನರಸಿಂಹಪ್ಪ ಹಾಜರಿದ್ದರು.

 

For Daily Updates WhatsApp ‘HI’ to 7406303366

error: Content is protected !!
Exit mobile version