ಯುವನಿಧಿ: ಸ್ವಯಂ ಘೋಷಣೆ ಸೆ.25ರೊಳಗೆ ಕಡ್ಡಾಯ

- Advertisement -
- Advertisement -

ಚಿಕ್ಕಬಳ್ಳಾಪುರ: ಯುವನಿಧಿ ಯೋಜನೆಯಡಿ ನಿರುದ್ಯೋಗ ಭತ್ಯೆ ಪಡೆಯುತ್ತಿರುವ ಫಲಾನುಭವಿಗಳು ಪ್ರತಿ ತಿಂಗಳು ಸ್ವಯಂ ಘೋಷಣೆ ಸಲ್ಲಿಸುವುದು ಕಡ್ಡಾಯವಾಗಿದೆ.

Quick facts: Yuvanidhi unemployment allowance beneficiaries must submit their September self-declaration on the Seva Sindhu portal by September 25, or that month’s direct cash transfer will be stopped.

Yuvanidhi self declaration Seva Sindhu portal

ಯುವನಿಧಿ ಯೋಜನೆ ಯಾರಿಗೆ?

2022–23ರಿಂದ 2025–26ನೇ ಶೈಕ್ಷಣಿಕ ವರ್ಷದ ಅವಧಿಯಲ್ಲಿ ಪದವಿ, ಸ್ನಾತಕೋತ್ತರ ಪದವಿ ಅಥವಾ ಡಿಪ್ಲೊಮಾ ಉತ್ತೀರ್ಣರಾಗಿ, ಸೇವಾ ಸಿಂಧು ಪೋರ್ಟಲ್‌ನಲ್ಲಿ ನೋಂದಾಯಿಸಿಕೊಂಡಿರುವ ಹಾಗೂ ಫಲಿತಾಂಶ ಪ್ರಕಟವಾದ ಬಳಿಕ 180 ದಿನಗಳ ಕಾಲ ನಿರುದ್ಯೋಗಿಗಳಾಗಿರುವ ಅರ್ಹ ಅಭ್ಯರ್ಥಿಗಳಿಗೆ ಜನವರಿ 2024ರಿಂದ ನೇರ ನಗದು ವರ್ಗಾವಣೆ ಮಾಡಲಾಗುತ್ತಿದೆ.

ಸ್ವಯಂ ಘೋಷಣೆ ಏಕೆ ಬೇಕು?

ಪ್ರತಿ ತಿಂಗಳು ಪ್ರಯೋಜನ ಪಡೆಯಲು ಅಭ್ಯರ್ಥಿಗಳು ತಾವು ನಿರುದ್ಯೋಗಿಗಳಾಗಿದ್ದು, ವ್ಯಾಸಂಗ ಮುಂದುವರಿಸಿಲ್ಲ ಹಾಗೂ ಸ್ವಯಂ ಉದ್ಯೋಗದಲ್ಲಿಲ್ಲ ಎಂಬುದನ್ನು ಸೇವಾ ಸಿಂಧು ಪೋರ್ಟಲ್‌ನ ಅಭ್ಯರ್ಥಿಗಳ ಲಾಗಿನ್‌ನಲ್ಲಿ ಸ್ವಯಂ ಘೋಷಣೆ ಮಾಡಬೇಕು.

ಗಡುವು ಏನು?

ಸೆಪ್ಟೆಂಬರ್ ತಿಂಗಳ ಸ್ವಯಂ ಘೋಷಣೆಯನ್ನು ಸೆಪ್ಟೆಂಬರ್ 25ರೊಳಗೆ ಸೇವಾ ಸಿಂಧು ಪೋರ್ಟಲ್‌ನಲ್ಲಿ ಸಲ್ಲಿಸಬೇಕು. ಸ್ವಯಂ ಘೋಷಣೆ ಸಲ್ಲಿಸದಿದ್ದಲ್ಲಿ ಆ ತಿಂಗಳ ನೇರ ನಗದು ವರ್ಗಾವಣೆ ಸ್ಥಗಿತಗೊಳ್ಳಲಿದೆ ಎಂದು ಉದ್ಯೋಗಾಧಿಕಾರಿ ಎಂ. ಪ್ರಸಾದ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪದೇ ಪದೇ ಕೇಳಲಾಗುವ ಪ್ರಶ್ನೆಗಳು (FAQ)

Who must submit the Yuvanidhi self-declaration?
All beneficiaries currently receiving the Yuvanidhi unemployment allowance via direct cash transfer.
Where and by when must it be submitted?
On the Seva Sindhu portal’s candidate login, by September 25 for the September declaration.
What happens if it’s missed?
That month’s direct cash transfer under Yuvanidhi will be stopped.

Stay tuned for more local updates.

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here

Captcha verification failed!
CAPTCHA user score failed. Please contact us!