Bagepalli : ಬಾಗೇಪಲ್ಲಿ ತಾಲ್ಲೂಕು ಕಚೇರಿ ಆವರಣದಲ್ಲಿ ಮತದಾನದ ಯಂತ್ರ (EVM) ಹಾಗೂ ವಿವಿಪ್ಯಾಟ್ ಕುರಿತು ಮತದಾರರಿಗೆ ಅರಿವು ಮೂಡಿಸುವ ಕಾರ್ಯಾಗಾರಕ್ಕೆ (Workshop) ಚಾಲನೆ ನೀಡಲಾಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಪ್ರಭಾರ ತಹಶೀಲ್ದಾರ್ ವಿ.ಸುಬ್ರಮಣ್ಯ” ಮತದಾನ ಯಂತ್ರ ಬಳಕೆ ಬಗ್ಗೆ ತಾಲ್ಲೂಕು ಕಚೇರಿಗೆ ಬರುವ ಸಾರ್ವಜನಿಕರಿಗೆ ಜನಜಾಗೃತಿ ಮೂಡಿಸಲಾಗುತ್ತಿದೆ”ಎಂದು ತಿಳಿಸಿದರು.
.ಚುನಾವಣಾ ಶಿರಸ್ತೇದಾರ್ ಎಂ.ವಿ.ವೆಂಕಟರತ್ನಮ್ಮ, ಕಸಬಾ ಕಂದಾಯ ಅಧಿಕಾರಿ ವೇಣುಗೋಪಾಲ್, ಗ್ರಾಮಲೆಕ್ಕಿಗ ಕಿರಣ್ ಕುಮಾರ್, ಚುನಾವಣಾ ಶಾಖೆ ಪ್ರಥಮ ದರ್ಜೆ ಸಹಾಯಕ ರವಿ ಕಲ್ಲೂರ್, ಕಚೇರಿ ಸಿಬ್ಬಂದಿ ವೈ.ಕೆ.ಕಾವ್ಯ, ಎಂ.ಭಾರತಮ್ಮ ಮತ್ತಿತರರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
