Home News ಮನೆ ಬಾಗಿಲಿಗೆ ಪಡಿತರ

ಮನೆ ಬಾಗಿಲಿಗೆ ಪಡಿತರ

0
Doorstep Ration Senior Citizens Chikkaballapur Anna Bhagya Siddaramaih

Chikkaballapur : ಈ ಮುಂಚೆ ಪಡಿತರ ಕಾರ್ಡ್‌ ಹೊಂದಿರುವ ಕುಟುಂಬದ ಯಾರಾದರೂ ಒಬ್ಬ ಸದಸ್ಯರು ತಮ್ಮ ವ್ಯಾಪ್ತಿಯ ನ್ಯಾಯಬೆಲೆ ಅಂಗಡಿ ಅಥವಾ ಅನ್ನಭಾಗ್ಯ ಪಡಿತರ ವಿತರಣಾ ಕೇಂದ್ರಗಳಿಗೆ ತೆರಳಿ ಬಯೊಮೆಟ್ರಿಕ್‌ ನೀಡಿದ ನಂತರ ತಮ್ಮ ಕುಟುಂಬಕ್ಕೆ ನಿಗದಿಪಡಿಸಿದ ಪಡಿತರ ಪಡೆಯಬೇಕಿತ್ತು. ಆಗ ವಯಸ್ಸಾದವರು ಪಡಿತರ ಕೇಂದ್ರಗಳಿಗೆ ಹೋಗಲು ಸಮಸ್ಯೆ ಎದುರಿಸುತ್ತಿದ್ದರು. ಇಂತಹ ಸಮಸ್ಯೆಗಳಿಗೆ ಕೊನೆ ಹಾಡಲು ‘ಮನೆ ಬಾಗಿಲಿಗೆ ಪಡಿತರ’ (Doorstep Ration) ಯೋಜನೆ ರೂಪಿಸಲಾಗಿದ್ದು 90 ವರ್ಷ (senior Citizens) ದಾಟಿದವರ ಮನೆ ಬಾಗಿಲಿಗೇ ಅನ್ನಭಾಗ್ಯ ಯೋಜನೆಯಡಿ ವಿತರಿಸುವ ಪಡಿತರವನ್ನು ತಲುಪಿಸಲು ಆಹಾರ ಇಲಾಖೆ ಮುಂದಾಗಿದೆ.

ಇಲಾಖೆಯ ಅಂಕಿ ಅಂಶಗಳ ಪ್ರಕಾರ ಚಿಕ್ಕಬಳ್ಳಾಪುರ ಜಿಲ್ಲೆಯ ಆರೂ ತಾಲ್ಲೂಕುಗಳಲ್ಲಿ ಹೀಗೆ 90 ವರ್ಷ ದಾಟಿದ ಮತ್ತು ಏಕ ವ್ಯಕ್ತಿಯ 193 ಮಂದಿ ಪಡಿತರ ಚೀಟಿದಾರರು ಇದ್ದು ಅವರಿಗೆ ಆಹಾರ ಇಲಾಖೆಯು ಮನೆ ಬಾಗಿಲಿಗೆ ಪಡಿತರ ಪೂರೈಸಲು ಮುಂದಾಗಿದೆ.

For Daily Updates WhatsApp ‘HI’ to 7406303366

NO COMMENTS

LEAVE A REPLY

Please enter your comment!
Please enter your name here

error: Content is protected !!
Exit mobile version