Home News Gauribidanur ಆಹಾರ ಸುರಕ್ಷತೆ ಅಧಿಕಾರಿಗಳ ದಾಳಿ, ₹40 ಸಾವಿರ ದಂಡ

ಆಹಾರ ಸುರಕ್ಷತೆ ಅಧಿಕಾರಿಗಳ ದಾಳಿ, ₹40 ಸಾವಿರ ದಂಡ

0

Gauribidanur: ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ ಜಿಲ್ಲಾಧಿಕಾರಿಗಳ ತಂಡ ಶುಕ್ರವಾರ ನಗರದಲ್ಲಿ ಬೇಕರಿ ಮತ್ತು ಹೋಟೆಲ್‌ಗಳಿಗೆ ದಾಳಿ ನಡೆಸಿ, ಸ್ವಚ್ಛತೆಯ ಕೊರತೆ ಪತ್ತೆಹಚ್ಚಿ ₹40 ಸಾವಿರ ದಂಡ ವಿಧಿಸಿದೆ.

ಗೌರಿಬಿದನೂರು ನಗರದ ಹೃದಯಭಾಗದಲ್ಲಿರುವ ಕೇಕ್‌ವರ್ಲ್ಡ್ ಬೇಕರಿಯಲ್ಲಿ ಅಧಿಕಾರಿಗಳು ಅಡುಗೆ ಕೋಣೆಯನ್ನು ಪರಿಶೀಲಿಸಿದರು. ಕೇಕ್‌, ಬ್ರೆಡ್‌, ಕ್ರೀಮ್ ತಯಾರಿಕೆಯಲ್ಲಿ ಸ್ವಚ್ಛತೆ ಪಾಲಿಸಲಾಗದಿದ್ದೂ, ಬಣ್ಣಗಳನ್ನು ಮಿತಿಗಿಂತ ಹೆಚ್ಚು ಬಳಸಲಾಗುತ್ತಿದ್ದು, ಬ್ರೆಡ್‌ಗಾಗಿ ಅಸುರಕ್ಷಿತ ನೀರು ಹಾಗೂ ದಿನಪತ್ರಿಕೆ ಹಾಳೆಗಳ ಬಳಕೆಯನ್ನು ಕಂಡುಹಿಡಿದರು. ಸಹಾಯಕರು ಕೈ ಮತ್ತು ತಲೆಗೆ ರಕ್ಷಾ ಕವಚವನ್ನು ಬಳಸದೇ ಕೆಲಸ ಮಾಡುತ್ತಿದ್ದರು.

ಅವಧಿ ಮೀರಿದ ಬಣ್ಣದ ಬಾಟಲಿ, ಕೇಕ್ ಮತ್ತು ಅಸುರಕ್ಷಿತ ಆಹಾರವನ್ನು ಪತ್ತೆಹಚ್ಚಿದ ಅಧಿಕಾರಿಗಳು ಅವುಗಳನ್ನು ಪ್ರಯೋಗಾಲಯ ಪರೀಕ್ಷೆಗೆ ಕಳುಹಿಸಿದರು. ಮಾಲೀಕರಿಗೆ ₹25 ಸಾವಿರ ದಂಡ ವಿಧಿಸಿ, ಸ್ವಚ್ಛತೆಯನ್ನು ಕಡ್ಡಾಯವಾಗಿ ಪಾಲಿಸುವಂತೆ ಎಚ್ಚರಿಸಿದರು.

ಆಹಾರ ಸುರಕ್ಷತಾ ಅಧಿಕಾರಿ ಡಾ. ಧರ್ಮೇಂದ್ರ ಮಾತನಾಡಿ, “ಹೆಚ್ಚಿನ ಬೇಕರಿ ಮತ್ತು ಹೋಟೆಲ್‌ಗಳಲ್ಲಿ ಪರಿಶೀಲನೆ ನಡೆಸಿದ್ದೇವೆ. ಸುರಕ್ಷತೆಯ ನಿಯಮಗಳು ಪಾಲಿಸದಿದ್ದ ಕಾರಣ ₹40 ಸಾವಿರ ದಂಡ ವಿಧಿಸಲಾಗಿದೆ,” ಎಂದು ತಿಳಿಸಿದರು.

ಪೌರಾಯುಕ್ತೆ ಡಿ.ಎಂ. ಗೀತಾ ಎಚ್ಚರಿಕೆ ನೀಡುತ್ತಾ, “ನಗರಸಭೆ ಅನೇಕ ಸಲಹೆಗಳನ್ನು ನೀಡಿದರೂ, ಕೆಲವು ಅಂಗಡಿ ಮಾಲೀಕರು ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ಜನರ ಆರೋಗ್ಯದೊಂದಿಗೆ ಚುಟಾಟವಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು,” ಎಂದು ಹೇಳಿದರು.

ಈ ದಾಳಿಯಲ್ಲಿ ತಾಲ್ಲೂಕು ಸುರಕ್ಷತೆ ಅಧಿಕಾರಿ ಡಾ. ಸತ್ಯನಾರಾಯಣ ರೆಡ್ಡಿ, ನವೀನ್, ಶ್ವೇತಾ, ಮತ್ತು ನಗರಸಭಾ ಸಿಬ್ಬಂದಿ ಭಾಗವಹಿಸಿದ್ದರು.

For Daily Updates WhatsApp ‘HI’ to 7406303366

NO COMMENTS

LEAVE A REPLY

Please enter your comment!
Please enter your name here

error: Content is protected !!
Exit mobile version