Home Gudibande ಬಾಳೆ ತೋಟಕ್ಕೆ ಬೆಂಕಿ

ಬಾಳೆ ತೋಟಕ್ಕೆ ಬೆಂಕಿ

0
Gudibande Banana plantation fire

Gudibande : ವಿದ್ಯುತ್ ಅವಘಢದಿಂದ (Electric Short Circuit) ಗುಡಿಬಂಡೆ ತಾಲ್ಲೂಕಿನ ಅಪ್ಪಿರೆಡ್ಡಿಹಳ್ಳಿ (AppireddyHalli) ಬಳಿ ಮಂಗಳವಾರ ಮಧ್ಯಾಹ್ನ ಬಾಳೆ ತೋಟಕ್ಕೆ ಬೆಂಕಿ ತಗಲಿ 700 ಗಿಡ, ಹನಿ ನೀರಾವರಿಗಾಗಿ ಅಳವಡಿಸಿದ್ದ ಪೈಪು ಇತರೆ ಉಪಕರಣಗಳು ಬೆಂಕಿಗೆ (Banana plantation fire) ಅಹುತಿಯಾಗಿವೆ.

ತಾಲ್ಲೂಕಿನ ವರ್ಲಕೊಂಡ ಗ್ರಾಮ ಪಂಚಾಯಿತಿ ಅಪ್ಪಿರೆಡ್ಡಿಹಳ್ಳಿ ಬಳಿಯ ಬೆಂಗಳೂರು ಮೂಲದ ರಘುರೆಡ್ಡಿ ಎಂಬುವವರ ತೋಟದಲ್ಲಿ 60 ಗುಂಟೆ ಜಾಗದಲ್ಲಿ 700ಕ್ಕೂ ಹೆಚ್ಚು ಬಾಳೆ ಗಿಡ‌ ಬೆಳೆಯಲಾಗಿತ್ತು. ತೋಟದಲ್ಲಿ ಕಾವಲುಗಾರ ಗ್ರಾಮಕ್ಕೆ ಹೊಗಿರುವ ಸಮಯದಲ್ಲಿ ವಿದ್ಯುತ್ ಅವಘಢ ಸಂಭವಿಸಿ ತಂಗಿನ ಗೆರೆಗಳಿಗೆ ಬೆಂಕಿ ತಗಲಿ, ಬಾಳೆ ಗಿಡಗಳಿಗೂ ಬೆಂಕಿ ಹರಡಿದೆ. ಇದನ್ನು ಗಮನಿಸಿದ ಪಕ್ಕದ ತೋಟದವರು ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಲಾಗಿದೆ. ಅವರು ಸ್ಥಳಕ್ಕೆ ಬರುಷ್ಟರಲ್ಲಿ ಅರ್ಧ ಫಸಲು ಬೆಂಕಿಗೆ ಅಹುತಿಯಾಗಿತು. ಅಗ್ನಿ ಶಾಮಕ ಸಿಬ್ಬಂದಿ ಬೆಂಕಿ ನಂದಿಸಲು ಯತ್ನಿಸದರೂ ಸಹ ಸಂಪೂರ್ಣವಾಗಿ ಬಾಳೇಗಿಡಗಳು ಸುಟ್ಟು ಹೋಗಿವೆ.

For Daily Updates WhatsApp ‘HI’ to 7406303366

NO COMMENTS

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.

error: Content is protected !!
Exit mobile version