Chikkaballapur : ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ (Lokasabha Election) ಚುನಾವಣೆಗೆ ಸೋಮವಾರ ನಾಮಪತ್ರಗಳನ್ನು (Nomination Withdrawal) ವಾಪಸ್ ಪಡೆಯಲು ಅಂತಿಮ ದಿನವಾಗಿದ್ದು ಒಟ್ಟು ಮೂವರು ಅಭ್ಯರ್ಥಿಗಳು ನಾಮಪತ್ರಗಳನ್ನು ವಾಪಸ್ ಪಡೆದರಿಂದ ಅಂತಿಮ ಕಣದಲ್ಲಿ 29 ಅಭ್ಯರ್ಥಿಗಳು ಸ್ಪರ್ಧೆ ನಡೆಸಲಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪಕ್ಷೇತರ ಅಭ್ಯರ್ಥಿಗಳಾಗಿ ನಾಮಪತ್ರ ಸಲ್ಲಿಸಿದ್ದ ಎಂ.ವಿ.ಬಾಲಮುರಳಿಕೃಷ್ಣ ಗೌಡ, ರಮೇಶ್, ರಾಮನಾಯ್ಕ್ ಅವರು ಉಮೇದುವಾರಿಕೆ ಹಿಂಪಡೆದಿದ್ದಾರೆ.
ಮಹದೇವ್ ಪಿ. (ಬಿಎಸ್ಪಿ), ಮುನಿವೆಂಕಟಪ್ಪ ಎಂ.ಪಿ. (ಸಿಪಿಎಂ), ಎಂ.ಎಸ್. ರಕ್ಷಾ ರಾಮಯ್ಯ (ಕಾಂಗ್ರೆಸ್), ಡಾ. ಕೆ.ಸುಧಾಕರ್ (ಬಿಜೆಪಿ), ಕಲಾವತಿ ಎನ್. (ಸೋಷಲಿಸ್ಟ್ ಯುನಿಟಿ ಸೆಂಟರ್ ಆಫ್ ಇಂಡಿಯಾ (ಕಮ್ಯೂನಿಸ್ಟ್), ನಾಗೇಶ್ ಎಸ್. (ದಿಗ್ವಿಜಯ ಭಾರತ ಪಾರ್ಟಿ), ಟಿ.ಆರ್. ನಾರಾಯಣರಾವ್ (ಇಂಡಿಯನ್ ಲೇಬರ್ ಪಾರ್ಟಿ–ಅಂಬೇಡ್ಕರ್ ಫುಲೆ), ವೆಂಕಟೇಶ ಮೂರ್ತಿ.ವಿ (ಉತ್ತಮ ಪ್ರಜಾಕೀಯ ಪಾರ್ಟಿ), ಜಿ.ಸುಬ್ರಮಣಿ ಶೆಟ್ಟಿ (ಕರ್ನಾಟಕ ರಾಷ್ಟ್ರ ಸಮಿತಿ), ಪಕ್ಷೇತರ ಅಭ್ಯರ್ಥಿಗಳಾಗಿ ಜಿ.ಎನ್. ಕೋದಂಡರೆಡ್ಡಿ, ಚಂದ್ರಶೇಖರ ಎಚ್.ಸಿ, ಡಿ.ಚಿನ್ನಪ್ಪ, ದೇವರಾಜ್ ಕೊರೋನ ವಾರಿಯರ್, ವಿ.ಎನ್. ನರಸಿಂಹಮೂರ್ತಿ ವಡಿಗೆರೆ, ನಸರುಲ್ಲಾ, ಭಾಸ್ಕರ್ ಅಂಕಾಲಮಡುಗು ಶಿವಾರೆಡ್ಡಿ, ಮೋಹಿತ್ ನರಸಿಂಹಮೂರ್ತಿ, ಜಿ.ಎನ್. ರವಿ, ರಾಜಣ್ಣ, ರಾಜರೆಡ್ಡಿ, ಎಂ.ಆರ್. ರಂಗನಾಥ, ಸಿ.ವಿ. ಲೋಕೇಶ್ ಗೌಡ, ವಲಸಪಲ್ಲಿ ಉತ್ತಪ್ಪ, ಟಿ.ವೆಂಕಟಶಿವುಡು, ಕೆ.ವೆಂಕಟೇಶ್, ಜಿ.ಎನ್. ವೆಂಕಟೇಶ್, ಸುಧಾಕರ್ ಎನ್., ಡಿ.ಸುಧಾಕರ, ಸಂದೇಶ್ ಜಿ. ಸ್ಪರ್ದಿಸಲಿದ್ದಾರೆ.