Chikkaballapur : ಮೇ 11 ರಂದು ಚಿಕ್ಕಬಳ್ಳಾಪುರ ನಗರದ ಜಾಲಾರಿ ಗಂಗಮ್ಮ ದೇವಾಲಯದ 62ನೇ ವರ್ಷದ ಧರ್ಮರಾಯರ ಹೂವಿನ ಕರಗ ಮಹೋತ್ಸವವು (Dharmaraya Swamy Karaga) ನಡೆಯಲಿದ್ದು ಬುಧವಾರ ಈ ಪ್ರಯುಕ್ತ ಕಳಸ ಸ್ಥಾಪನೆ, ಗಣಪತಿ ಹೋಮ, ಧ್ವಜಾರೋಹಣ (Dhwajarohana) ಮತ್ತು ಪ್ರಸಾದ ವಿನಿಯೋಗ ನಡೆಯಿತು.
ಎಸ್.ಎನ್.ರಮೇಶ್ ಶಾಸ್ತ್ರಿ ಅವರ ನೇತೃತ್ವದಲ್ಲಿ ಜಾಲಾರಿ ಗಂಗಮ್ಮ ದೇವಿ ಸಹಸ್ರ ನಾಮಾರ್ಚನೆ, ಚಂಡಿಕಾ ಹೋಮ ಸೇರಿದಂತೆ ವಿವಿಧ ಧಾರ್ಮಿಕ ವಿಧಿ ವಿಧಾನಗಳು ಜರುಗಿದವು.
ಕರಗ ಸಮಿತಿ ಗೌರವಾಧ್ಯಕ್ಷ ವಿ ಗಂಗಾಧರಮೂರ್ತಿ, ಅಧ್ಯಕ್ಷ ಕೆ.ವಿ.ಮಂಜುನಾಥ್, ಸದಸ್ಯರಾದ ಕೆ.ರಾಮು, ನಗರಸಭಾ ಸದಸ್ಯ ಮುನಿಕೃಷ್ಣ, ಸುದರ್ಶನ್, ಮೊಬೈಲ್ಬಾಬು, ಗೋವಿಂದರಾಜು, ಸಿ.ಎಲ್.ಸತೀಶ್, ಶೇಖರ್ ಬಾಬು, ಗುರುರಾಜು, ರಾಮಕೃಷ್ಣ, ವೆಂಕಟಸ್ವಾಮಿ, ರಘು, ಲೋಕೇಶ್, ನಂಜುಂಡಾಚಾರಿ, ಅಣ್ಣಮ್ಮ ದೇವಿ, ರಾಜು ಮತ್ತಿತರರು ಪಾಲ್ಗೊಂಡಿದ್ದರು.
