Home Gauribidanur ಆಟೊ, ಕಾರು ಅಪಘಾತ; ಒಬ್ಬರ ಸಾವು

ಆಟೊ, ಕಾರು ಅಪಘಾತ; ಒಬ್ಬರ ಸಾವು

0
Chikkaballapur APMC Agriculture Farmers Market

Gauribidanur: ಆಟೊ ಮತ್ತು ಕಾರಿನ ನಡುವೆ ಅಪಘಾತ ಸಂಭವಿಸಿ, ಆರು ಮಂದಿ ಗಂಭೀರವಾಗಿ ಗಾಯಗೊಂಡು ಒಬ್ಬರು ಮೃತಪಟ್ಟಿರುವ ಘಟನೆ ಗೌರಿಬಿದನೂರು ನಗರದ ಹೊರವಲಯದ ಬ್ಯಾಂಬೂ ಢಾಬಾ ಬಳಿ ಸಂಭವಿಸಿದೆ.

ಮೃತ ವ್ಯಕ್ತಿಯನ್ನು ಅಸ್ಸಾಂ ಮೂಲದ ಧೀರೇನ್ ಸಿಂಗ್ (50) ಎಂದು ಗುರುತಿಸಲಾಗಿದ್ದು, ಗಂಭೀರವಾಗಿ ಗಾಯಗೊಂಡ ಅಸ್ಸಾಂ ಮೂಲದ ಉತ್ತಮ್ (23), ನಿರಂನ್ ಧೋನಿ (22), ತಾಲ್ಲೂಕಿನ ವೇದಲವೇಣಿ ಗ್ರಾಮದ ಧರ್ಮಯ್ಯ (45), ಗಂಗಮ್ಮ (50), ನರಸಮ್ಮ (65) ಅವರಾರು ಚಿಕಿತ್ಸೆ ಪಡೆಯುತ್ತಿದ್ದಾರೆ.

ಬೆಂಗಳೂರಿನಿಂದ ಬರುತ್ತಿದ್ದ ಕಾರು ಆಟೊಗೆ ಡಿಕ್ಕಿ ಹೊಡೆಡಿದ್ದು, ಆಟೊದಲ್ಲಿದ್ದ ಕಾರ್ಮಿಕ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ವೇದಲವೇಣಿ ಬಳಿ ಇರುವ ಗ್ರಾನೈಟ್ ಕಾರ್ಖಾನೆಯಲ್ಲಿ ಅವರು ಕೆಲಸ ಮಾಡುತ್ತಿದ್ದರು ಎಂದು ತಿಳಿದುಬಂದಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಡಿದ್ದಾರೆ.

NO COMMENTS

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.

error: Content is protected !!
Exit mobile version