Home News Gauribidanur ಮೋದಿ ಆಡಳಿತದಲ್ಲಿ ದಲಿತರಿಗೆ ಅಧಿಕಾರ : ಮಂದ ಕೃಷ್ಣ ಮಾದಿಗ

ಮೋದಿ ಆಡಳಿತದಲ್ಲಿ ದಲಿತರಿಗೆ ಅಧಿಕಾರ : ಮಂದ ಕೃಷ್ಣ ಮಾದಿಗ

0
Gauribidanur Manda Krishna Madiga Sudhakar Campaign

Gauribidanur : ಗೌರಿಬಿದನೂರು ತಾಲ್ಲೂಕಿನ ವಿವಿಧೆಡೆ ಮಂಗಳವಾರ ಮಾದಿಗ ಮೀಸಲಾತಿ ಹೋರಾಟ ಸಮಿತಿ ರಾಷ್ಟ್ರೀಯ ಅಧ್ಯಕ್ಷ ಮಂದ ಕೃಷ್ಣ ಮಾದಿಗ (Manda Krishna Madiga) ಚಿಕ್ಕಬಳ್ಳಾಪುರ ಲೋಕಸಭಾ (Chikkaballapur Lokasabha) ಕ್ಷೇತ್ರದ BJP ಅಭ್ಯರ್ಥಿ ಡಾ.ಕೆ.ಸುಧಾಕರ್‌ (K Sudhakar) ಪರ ಪ್ರಚಾರ (Campaign) ನಡೆಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಮಂದ ಕೃಷ್ಣ ಮಾದಿಗ “ಕೇಂದ್ರ ಸರ್ಕಾರದ ಸಚಿವ ಸಂಪುಟದಲ್ಲಿ ಇತಿಹಾಸದಲ್ಲಿ ಎಂದಿಗೂ ಪರಿಶಿಷ್ಟ ಜಾತಿ, ಪಂಗಡ ಹಾಗೂ ಹಿಂದುಳಿದ ವರ್ಗದ ಪ್ರಾತಿನಿಧ್ಯ ಶೇ40 ದಾಟಿರಲಿಲ್ಲ. ನರೇಂದ್ರ ಮೋದಿ ಪ್ರಧಾನಿಯಾದ ಬಳಿಕ ಶೇ 60 ಪ್ರಾತಿನಿಧ್ಯ ಸಿಕ್ಕಿದೆ. ಮಾದಿಗ ಮೀಸಲಾತಿ ಹೋರಾಟಕ್ಕೆ ಬೆಂಬಲವಾಗಿ ನಿಂತಿರುವ ಸುಧಾಕರ್ ಅವರಿಗೆ ಕೃತಜ್ಞತೆ ಸಲ್ಲಿಸಲು ಬಂದಿದ್ದೇನೆ. ಮೋದಿ ಅವರು ಮತ್ತೆ ಪ್ರಧಾನಿ ಆಗುವಂತೆ ನೋಡಿಕೊಳ್ಳುವುದು ನಮ್ಮ ಜವಾಬ್ದಾರಿ” ಎಂದು ತಿಳಿಸಿದರು.

ಪ್ರಚಾರದಲ್ಲಿ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್‌.ಅಶೋಕ, ಶಶಿಧರ್, ಮಾರ್ಕೆಟ್ ಮೋಹನ್, ಜಯಣ್ಣ, ಮಂಜುನಾಥ ರೆಡ್ಡಿ, ಸಿ.ಆರ್.ನರಸಿಂಹ ಮೂರ್ತಿ, ವೇಣುಗೋಪಾಲ ರೆಡ್ಡಿ ಉಪಸ್ಥಿತರಿದ್ದರು.

For Daily Updates WhatsApp ‘HI’ to 7406303366

NO COMMENTS

LEAVE A REPLY

Please enter your comment!
Please enter your name here

error: Content is protected !!
Exit mobile version