Chikkaballapur : ಚಿಕ್ಕಬಳ್ಳಾಪುರ ತಾಲ್ಲೂಕಿನ ಗುಂಡ್ಲ ಮಂಡಿಕಲ್ಲು ಗ್ರಾಮದ ಎನ್.ಎಸ್. ವಿದ್ಯಾನಿಕೇತನ ಶಾಲೆಯಲ್ಲಿ ಬುಧವಾರ ಮಂಡಿಕಲ್ಲು (Mandikal) ಕ್ಲಸ್ಟರ್ ಮಟ್ಟದ ವಿಷಯಾಧಾರಿತ ಕಲಿಕೋಪಕರಣ ಪ್ರದರ್ಶನ (Themed Art Exhibition) ಕಾರ್ಯಕ್ರಮ ನಡೆಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಸಂಸ್ಥೆಯ ಅಧ್ಯಕ್ಷ ತಿಮ್ಮಪ್ಪ “ಯಾವುದೇ ವಿಷಯಕ್ಕೆ ಸಂಬಂಧಿಸಿದ ಕಲಿಕೋಪಕರಣಗಳನ್ನು ಮಕ್ಕಳಿಂದಲೇ ತಯಾರು ಮಾಡಿಸಿದಲ್ಲಿ ಆ ಮಗುವಿನ ಮಾನಸಿಕ ದೃಢತೆ ಹೆಚ್ಚುತ್ತದೆ ಮತ್ತು ಕೌಶಲ ತೋರ್ಪಡಿಸಲು ಸಾಧ್ಯ. ಮಗುವಿನ ಆಸಕ್ತಿ ಗಮನಿಸಿ ಅದೇ ವಿಷಯದಲ್ಲಿ ಮುಂದೆ ಬರುವಂತೆ ಪ್ರೋತ್ಸಾಹಿಸಬೇಕು” ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಮುಖ್ಯಶಿಕ್ಷಕ ಗಂಗರಾಜು ಸೇರಿದಂತೆ ಶಿಕ್ಷಕರು, ಪೋಷಕರು ಪಾಲ್ಗೊಂಡಿದ್ದರು.
